ADVERTISEMENT

ಗಡ್ಡಿಯಲ್ಲಿ ಹಾರಾಡಿದ ತಿರಂಗಧ್ವಜ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 14:32 IST
Last Updated 15 ಆಗಸ್ಟ್ 2019, 14:32 IST
 ಕಕ್ಕೇರಾ ಪಟ್ಟಣದ ಸಮೀಪದ ನೀಲಕಂಠರಾಯನಗಡ್ಡಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
 ಕಕ್ಕೇರಾ ಪಟ್ಟಣದ ಸಮೀಪದ ನೀಲಕಂಠರಾಯನಗಡ್ಡಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು   

ಕಕ್ಕೇರಾ (ಯಾದಗಿರಿ): ಪ್ರವಾಹದಿಂದ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿರುವ ನೀಲಕಂಠರಾಯನಗಡ್ಡಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಗೋವಿಂದರ್ ರಾಷ್ಟ್ರಧ್ವಜಾರೋಹಣ ಮಾಡಿದರು.

ಕೃಷ್ಣ ನದಿ ಪ್ರವಾಹ ಹಿನ್ನೆಲೆಯಲ್ಲಿ ಗಡ್ಡಿ ಸಂಪರ್ಕ ಸಹಕಾರಿಯಾಗಿದ್ದ ಜಾಲರಿ ಸೇತುವೆ ಪ್ರವಾಹಕ್ಕೆ ಕೊಚ್ಚಿಕೊಂಡ ಹೋದ ಹಿನ್ನೆಲೆಯಲ್ಲಿ ಗಡ್ಡಿ ಶಾಲಾ ಮುಖ್ಯ ಗುರು ಬಸವನಗೌಡ ಪಾಟೀಲ ಗಡ್ಡಿಗೆ ತೆರಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಗೋವಿಂದರ್‌ಗೆ ಧ್ವಜಾರೋಹಣ ಮಾಡಿರಿ ಎಂದು ಸೂಚಿಸಿದ್ದರಿಂದ ಶಾಲಾ ಮಕ್ಕಳ ಜೊತೆಗೆ ಧ್ವಜಾರೋಹಣ ಮಾಡಿದರು.

ಗಡ್ಡಿಯ ಪ್ರಮುಖರಾದ ಯಂಕಪ್ಪ, ಮರಪ್ಪ ಅಂಬ್ರಪ್ಪ, ದೇವರಾಜ ಅನೇಕರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.