ADVERTISEMENT

ಯಾದಗಿರಿ | ಆಸ್ತಿ ಪರಭಾರೆ: ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:43 IST
Last Updated 23 ಆಗಸ್ಟ್ 2025, 4:43 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಯಾದಗಿರಿ: ಮಹಿಳೆಯೊಬ್ಬರಿಗೆ ಸೇರಿದ್ದ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಯನ್ನು ಬೇರೊಬ್ಬರಿಗೆ ಪರಭಾರೆ ಮಾಡಿದ್ದ ಆರೋಪದಡಿ ಸುರಪುರ ನಗರಸಭೆಯ ಹಿಂದಿನ ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹೆಮ್ಮಡಗಿ ನಿವಾಸಿ ಝಾನ್ಸಿಲಕ್ಷ್ಮಿ ಈ ಬಗ್ಗೆ ದೂರು ನೀಡಿದ್ದರು. ನಗರಸಭೆಯ ಹಿಂದಿನ ಆಯುಕ್ತ ಜೀವನಕುಮಾರ್ (ಹಾಲಿ ಶಹಾಪುರ ನಗರಸಭೆ ಆಯುಕ್ತ), ನಿವೃತ್ತ ಅಧಿಕಾರಿ ಎಜಾಜ್ ಹುಸೇನ್, ಕರ ವಸೂಲಿಗಾರ (ಹಾಲಿ ಕಂದಾಯ ಅಧಿಕಾರಿ) ವೆಂಕಟೇಶ ಹಾಗೂ ಜಯಶೀಲ ಮುರುಳೀಧರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.