ADVERTISEMENT

ಸುಮಲತಾಗೆ ತಪ್ಪು ಮಾಹಿತಿ– ಸಿಎಂ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 14:48 IST
Last Updated 5 ಏಪ್ರಿಲ್ 2019, 14:48 IST
   

ಬಾಳೆಹೊನ್ನೂರು: ‘ಸಾಲಮನ್ನಾ ಮಾಡಲು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಸುಮಲತಾ ಅಂಬರೀಷ್ ಅವರಿಗೆ ಅಧಿಕಾರಿಯೊಬ್ಬರು ಹೇಳಿದ್ದಾಗಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ತಿಳಿಸಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

‘ನರೇಂದ್ರ ಮೋದಿ ಭಾಷಣವನ್ನು ಅವರು ಅನುಕರಿಸಿರಬೇಕು. ಸಾಲ ಮನ್ನಾ ಯೋಜನೆ ಅಡಿಯಲ್ಲಿ ₹6,500 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದು 15.58 ಲಕ್ಷ ಜನರಿಗೆ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಗೆ ₹350 ಕೋಟಿಗೂ ಅಧಿಕ ಹಣ ಬಂದಿದೆ. ಅಧಿಕಾರಿಗಳ ವಿರೋಧದ ನಡುವೆಯೂ ಸಾಲಮನ್ನಾ ಮಾಡಿದ್ದೇನೆ. ನಾನು ರೈತರ ವಿರೋಧಿಯೇ’ ಎಂದು ಪ್ರಶ್ನಿಸಿದರು.

‘ರಾಜಕೀಯ ವೃತ್ತಿಯಲ್ಲ. ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹುಡುಗರು ಯಡಿಯೂರಪ್ಪ ಅವರ ಬಾಯಲ್ಲೂ ಎಲ್ಲಿದ್ದೀಯಪ್ಪಾ ಕುಮಾರಣ್ಣ ಅಂತಾ ಚುನಾವಣೆ ಆದ ಮೇಲೆ ಪ್ರಶ್ನಿಸುತ್ತಾರೆ ಎಂದು ಹರಿಯಬಿಟ್ಟಿದ್ದಾರೆ. ಅಧಿಕಾರ ಇದ್ದಾಗಲೂ ನಾವೇನು ಮೆರೆದಿಲ್ಲ’ ಎಂದು ಖಾರವಾಗಿ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.