ಚಳ್ಳಕೆರೆ: ಅಧಿಕೃತ ದಾಖಲೆ ಇಲ್ಲದೆ ಬೊಲೆರೊ ವಾಹನದಲ್ಲಿ ₹ 8.38 ಲಕ್ಷ ಸಾಗಿಸುತ್ತಿರುವುದನ್ನು ಚುನಾವಣಾಧಿಕಾರಿಗಳು ನಗರದ ಹೊರವಲಯದ ಚಿತ್ರದುರ್ಗ ರಸ್ತೆ ಕೆಇಬಿ ಮುಂಭಾಗದ ಚೆಕ್ಪೋಸ್ಟ್ನಲ್ಲಿ ಮಂಗಳವಾರ ಪತ್ತೆ ಹಚ್ಚಿದ್ದಾರೆ.
ಚಿತ್ರದುರ್ಗದ ಕಡೆಯಿಂದ ಬಂದ ಬೊಲೆರೊ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಹೂವಿನ ಕುಂಡಗಳ ನಡುವೆ ಇಟ್ಟಿದ್ದ ಬ್ಯಾಗಿನಲ್ಲಿ ಈ ಹಣ ಸಿಕ್ಕಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಕಾರ್ಮಿಕರಿಗೆ ಕೂಲಿ ನೀಡಲು ಚಿತ್ರದುರ್ಗದ ಪಂಜಾಬ್ ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಹೋಗುತ್ತಿರುವುದಾಗಿ ಬೊಲೆರೊದಲ್ಲಿದ್ದ ಹೈದರಾಬಾದ್ ದಿಲೀಪ್ ಬಿಲ್ಡರ್ನ ವ್ಯವಸ್ಥಾಪಕ ಅಮರನಾಥ್ ತಿಳಿಸಿದ್ದಾರೆ. ಎಸ್ಎಸ್ಟಿ ಅಧಿಕಾರಿ ಪ್ರೊ. ಕರಿಬಸಪ್ಪ ಹಾಗೂ ಪೊಲೀಸ್ ಅಧಿಕಾರಿ ತಿಪ್ಪೇಸ್ವಾಮಿ ಹಣ ಹಾಗೂ ವಾಹನವನ್ನು ವಶಪಡಿಸಿಕೊಂಡು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಣ್ಣ, ಪಿಎಸ್ಐ ಸತೀಶನಾಯ್ಕ, ತಿಪ್ಪೇಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.