ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಗಲಗಲಿ ಮೀಸಲು ಕ್ಷೇತ್ರ (ಪರಿಶಿಷ್ಟ ಪಂಗಡ) ಹಾಗೂ ಧಾರವಾಡ ತಾಲ್ಲೂಕು ಪಂಚಾಯ್ತಿಯ ಅಮ್ಮಿನಬಾವಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದಸ್ಯರೇ ಈ ಹಿಂದೆ ಗೆಲುವು ಸಾಧಿಸಿದ್ದರು. ಅವರುಗಳ ಅಕಾಲಿಕ ನಿಧನದಿಂದ ಸ್ಥಾನಗಳು ತೆರವಾಗಿದ್ದವು. ಗಲಗಲಿಯಲ್ಲಿ ಮಗಿಯಪ್ಪ ದೇವನಾಳ, ಅಮ್ಮಿನಬಾವಿಯಲ್ಲಿ ಸುರೇಂದ್ರ ದೇಸಾಯಿ ಗೆಲುವು ಸಾಧಿಸಿದವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.