ಮತದಾನ ಅತ್ಯಂತ ಅಮೂಲ್ಯವಾದ ಹಕ್ಕು. ಅದನ್ನು ತಪ್ಪದೇ ಚಲಾಯಿಸಬೇಕು. ಸಮರ್ಥರು ಮತ್ತು ಅಸಮರ್ಥರನ್ನು ನಿಖರವಾಗಿ ಗುರುತಿಸಬೇಕು. ಅಭ್ಯರ್ಥಿಗಳ ಗುಣಾವಗುಣಗಳನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಬೇಕು.
ಒಳ್ಳೆಯ ಅಭ್ಯರ್ಥಿಯನ್ನು ಗುರುತಿಸಿ ಮತ ಹಾಕಬೇಕು. ಮತದಾನ ಮಾಡದೇ ಅಥವಾ ತಪ್ಪು ಆಯ್ಕೆ ಮಾಡಿ ಪಶ್ಚಾತ್ತಾಪ ಪಡುವುದು ಸಲ್ಲದು. ಕೆಟ್ಟ ರಾಜಕಾರಣಿಗಳ ಬಗ್ಗೆ ಮಾತನಾಡುವುದು ಸುಲಭ. ಆದರೆ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮದೇ ಜವಾಬ್ದಾರಿ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದಷ್ಟೂ ಉತ್ತಮ ಫಲಿತಾಂಶದ ಅವಕಾಶ ಹೆಚ್ಚು.
–ಜಾವಗಲ್ ಶ್ರೀನಾಥ್, ಹಿರಿಯ ಕ್ರಿಕೆಟಿಗ/ ಐಸಿಸಿ ರೆಫರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.