ADVERTISEMENT

ಟ್ವೀಟ್ಟಾದ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST

ಕಾಂಗ್ರೆಸ್‌ ದುರಾಡಳಿತದಿಂದ ರಾಜಧಾನಿಯ ಸ್ಥಿತಿ ಹದಗೆಟ್ಟಿರುವುದನ್ನು ಖಂಡಿಸಿ #BengaluruRakshisi ಪಾದಯಾತ್ರೆ ಆರಂಭವಾಗಿದೆ. 14 ದಿನಗಳ ಯಾತ್ರೆಗೆ ಮೊದಲ ದಿನವೇ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಕಳಪೆ ಮೂಲಭೂತ ಸೌಕರ್ಯ, ಕಾನೂನು ಹಾಗೂ ಸಂಚಾರ ಅವ್ಯವಸ್ಥೆ, ಕೆರೆ ಮಾಲಿನ್ಯ, ಕಸ ವಿಲೇವಾರಿ ಸಮಸ್ಯೆಯು ಬೆಂಗಳೂರಿಗೆ ಕಾಂಗ್ರೆಸ್ ನೀಡಿದ ಕೊಡುಗೆ.

ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ‏

ಬೆಂಗಳೂರನ್ನು ಈಗ ಕ್ರಿಯಾಶೀಲ ನಗರ, ಮುಂಚೂಣಿಯ ಸ್ಟಾರ್ಟ್‌– ಅಪ್‌ ನಗರ, ಬಂಡವಾಳ ಹೂಡಿಕೆಗೆ ದೇಶದಲ್ಲಿನ ಉತ್ತಮ ನಗರ, ಜಾಗತಿಕ ನಗರ ಎಂದೆಲ್ಲ ಕರೆಯಲಾಗುತ್ತಿದೆ. ಕರ್ನಾಟಕದ ಬಿಜೆಪಿಯ ದುರಾಡಳಿತದಿಂದಾಗಿ 2012ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯು ಬೆಂಗಳೂರನ್ನು ‘garbage city' ಎಂದು ಗುರುತಿಸಿತ್ತು. #NammaBengaluruNammaHemme

ADVERTISEMENT

ಕರ್ನಾಟಕ ಕಾಂಗ್ರೆಸ್‌

ನಮ್ಮ ಹೆಮ್ಮೆಯ ಬೆಂಗಳೂರು ಮತ್ತು ಕರ್ನಾಟಕ ರಾಜ್ಯವನ್ನು ರಾಜಕೀಯ ದುರುದ್ದೇಶದಿಂದ ಸುಳ್ಳು ಸುಳ್ಳಾಗಿ ಕೆಟ್ಟದಾಗಿ ಬಿಂಬಿಸಿದರೆ ಜನ ತಕ್ಕ ಪಾಠ ಕಲಿಸಲಿದ್ದಾರೆ

ಆನಂದ್‌ ರಾಮಣ್ಣ
@anandramanna

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.