ADVERTISEMENT

ನನ್ನನ್ನು ಸೋಲಿಸಲು ಅಧಿಕಾರಿಗಳೂ ವಾಮಮಾರ್ಗ ಅನುಸರಿಸಿದ್ದಾರೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 10:29 IST
Last Updated 13 ಮೇ 2018, 10:29 IST
ನನ್ನನ್ನು ಸೋಲಿಸಲು ಅಧಿಕಾರಿಗಳೂ ವಾಮಮಾರ್ಗ ಅನುಸರಿಸಿದ್ದಾರೆ
ನನ್ನನ್ನು ಸೋಲಿಸಲು ಅಧಿಕಾರಿಗಳೂ ವಾಮಮಾರ್ಗ ಅನುಸರಿಸಿದ್ದಾರೆ   

ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಅಧಿಕಾರಿಗಳೂ ವಾಮಮಾರ್ಗ ಅನುಸರಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿಯಿಂದ ಸಾವಿರಾರು ಜನರ ಹೆಸರು ಉದ್ದೇಶಪೂರ್ವಕವಾಗಿಯೇ ಕೈ ಬಿಡಲಾಗಿದೆ ಎಂದು ಆರೋಪಿಸಿದರು. ನನ್ನ ಕ್ಷೇತ್ರದಲ್ಲಿ  ಗೋಲ್ ಮಾಲ್ ನಡೆದಿವೆ. ಅನೇಕ ಕಡೆ ಇವಿಎಂ ಯಂತ್ರ ಅದಲು ಬದಲು ಮಾಡಿದ್ದಾರೆ ಎಂದರು. ಎನೇ ಆದರೂ ನಾನೇ ಗೆಲುವು ಪಡೆಯುತ್ತೇನೆ‌. ನಮ್ಮ‌ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT