ADVERTISEMENT

ನೋಟಾ ಹಾಕುವುದು ವ್ಯರ್ಥ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ಉಮಾರಾವ್‌, ಸಾಹಿತಿ
ಉಮಾರಾವ್‌, ಸಾಹಿತಿ   

ನಮ್ಮ ಆಯ್ಕೆಯನ್ನು ತಿಳಿಸುವುದಕ್ಕಾದರೂ ನಾವು ಮತ ಹಾಕಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಆಯ್ಕೆಗೆ ಬಹಳ ಪ್ರಾಮುಖ್ಯತೆ ಇದೆ. ಮತ ಹಾಕದೆಯೇ, ನಗರ ಅಭಿವೃದ್ಧಿಯಾಗಿಲ್ಲ ಎಂದು ದೂರುವುದರಲ್ಲಿ ಅರ್ಥವಿಲ್ಲ. ಮೊದಲು ನಮ್ಮ ಹಕ್ಕನ್ನು ಸರಿಯಾಗಿ ಬಳಸಬೇಕು. ನಮ್ಮನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡಿದಾಗಲೇ ನಮ್ಮ ಬೇಡಿಕೆಗಳನ್ನು ಸಲ್ಲಿಸಲು ಹಾಗೂ ಈಡೇರಿಸದಿದ್ದಲ್ಲಿ ಅದನ್ನು ಪ್ರಶ್ನಿಸಲು ಸಾಧ್ಯ. ಅದಕ್ಕಾಗಿ ಮತದಾನ ಮಾಡಬೇಕು.

ನೋಟಾ ಮತ ಹಾಕುವುದು ವ್ಯರ್ಥ. ಅದರ ಬದಲು, ಇರುವ ಆಯ್ಕೆಯಲ್ಲಿಯೇ ಉತ್ತಮರನ್ನು ಆರಿಸಿ ಅವರಿಗೆ ಮತ ಹಾಕುವುದು ಸರಿ ಎನ್ನುವುದು ನನ್ನ ಅಭಿಪ್ರಾಯ. ಮತದಾನದ ಹಕ್ಕು ಪಡೆದ ನಂತರ ಎಲ್ಲ ಚುನಾವಣೆಗಳಲ್ಲಿಯೂ ನಾನು ತಪ್ಪದೇ ಮತ ಹಾಕಿದ್ದೇನೆ. ನಮ್ಮ ಹಕ್ಕನ್ನು ಸಾಬೀತುಪಡಿಸುವ ಅವಕಾಶ ಕಳೆದುಕೊಳ್ಳಬಾರದು.

-ಉಮಾರಾವ್‌, ಸಾಹಿತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.