ನೂರಕ್ಕೆ ನೂರರಷ್ಟು ಜನ ಮತ ಚಲಾಯಿಸಿದರೆ ನಮ್ಮನ್ನು ಆಳುವವರ ಗುಣಮಟ್ಟ ಹೆಚ್ಚಾಗುತ್ತದೆ. ಜನರ ಆದೇಶ ಹೆಚ್ಚು ಸ್ಪಷ್ಟವಾಗಿರುತ್ತದೆ. ಅವ್ರು ಸರಿ ಇಲ್ಲ, ಇವ್ರು ಸರಿ ಇಲ್ಲ ಎಂದುಕೊಂಡು ಮತದಾನವನ್ನೇ ಮಾಡದಿರುವುದು ಸರಿಯಲ್ಲ. ಕನಿಷ್ಠ ‘ನಮಗೆ ಇವರಲ್ಲಿ ಯಾರೂ ಬೇಡ’ ಎಂಬುದನ್ನಾದರೂ ಮತದಾನದ ಮೂಲಕವೇ ಹೇಳಬೇಕು. ಈಗ ನಮ್ಮ ದೇಶದಲ್ಲಿ ಶೇಕಡ ಅರವತ್ತೋ ಎಪ್ಪತ್ತೋ ಜನರಷ್ಟೇ ಮತ ಚಲಾಯಿಸುತ್ತಿದ್ದಾರಂತೆ. ಮತ ಚಲಾಯಿಸುವವರ ಪ್ರಮಾಣ ಶೇಕಡ ನೂರು ಆಗಬೇಕು.
ಕಳೆದ ಸಲ ನಮ್ಮಲ್ಲಿ ಚೆನ್ನಾಗಿಯೇ ಮತದಾನ ಆಗಿದೆ. ಆದರೆ, ಈ ಸಲ ನೂರಕ್ಕೆ ನೂರರಷ್ಟು ಜನ ಮತ ಚಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಶ್ರಮಿಸುತ್ತಿದೆ. ಈ ಜಾಗೃತಿಯ ಅಂಗವಾಗಿಯೇ ನಾನೊಂದು ಹಾಡನ್ನೂ ಬರೆದಿದ್ದೇನೆ. ‘ಮಾಡಿ ಮಾಡಿ ಮಾಡಿ ಮತದಾನ/ ಇರಲಿ ದೇಶದ ಮೇಲೆ ಅಭಿಮಾನ’ ಎಂಬುದು ಆ ಹಾಡಿನ ಟ್ಯಾಗ್ ಲೈನ್. ಈ ಹಾಡನ್ನು ಕೇಳಿ, ಒಂದಿಷ್ಟು ಜನರಿಗೆ ಮತದಾನ ಮಾಡಲು ಪ್ರೇರಣೆ ಸಿಕ್ಕರೆ ನಮ್ಮ ಶ್ರಮ ಸಾರ್ಥಕ.
-ಯೋಗರಾಜ್ ಭಟ್,
ಸಿನಿಮಾ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.