ಬಂಟ್ವಾಳ: ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರಿಂದ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ಸೋಮವಾರ ರಾತ್ರಿ ನೀಡಿರುವ ಹೇಳಿಕೆ ವಿವಾದದ ರೂಪ ಪಡೆದುಕೊಂಡಿದೆ.
‘ಮುಂದಿನ ಚುನಾವಣೆ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ನಡುವೆ ಅಲ್ಲ. ಬದಲಿಗೆ ರಾಮ ಮತ್ತು ಅಲ್ಲಾಹ್ ನಡುವಿನ ಚುನಾವಣೆ. ಬಂಟ್ವಾಳಕ್ಕೆ ರಾಮ ಬೇಕೋ ಅಲ್ಲಾಹ್ ಬೇಕೋ ಎಂಬುದನ್ನು ಈಗಲೇ ನಿರ್ಧರಿಸಬೇಕು.
ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ರಮಾನಾಥ ರೈ ಅವರು ತಾವು ಮುಸ್ಲಿಮರ ಮತದಿಂದ ಗೆದ್ದವರು ಎಂದು ಹೇಳಿಕೊಂಡಿದ್ದಾರೆ. ಇದು ಹಿಂದೂಗಳ ಸ್ವಾಭಿಮಾನದ ವಿಚಾರ’ ಎಂದು ಸುನಿಲ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.