ADVERTISEMENT

ಈ ವಾರ ತೆರೆಗೆ ಒಲವೇ ಮಂದಾರ ಕಂಠೀರವ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಗೋವಿಂದ ರಾಜ್ ನಿರ್ಮಿಸಿರುವ ಜಯತೀರ್ಥ ನಿರ್ದೇಶನದ ‘ಒಲವೇ ಮಂದಾರ’ ಚಿತ್ರದ ಛಾಯಾಗ್ರಹಣ ರವಿಕುಮಾರ್ ಸಾನ, ಸಂಗೀತ ದೇವಾ, ಕಲೆ ಹೊಸಮನೆ ಮೂರ್ತಿ, ನೃತ್ಯ ಸ್ಟೈಲೋ ಇಮ್ರಾನ್, ಸಾಹಸ ರಾಮಲಕ್ಷ್ಮಣ್. ತಾರಾಗಣದಲ್ಲಿ ಶ್ರಿಕಾಂತ್, ಆಕಾಂಕ್ಷಾ, ನಾಸಿರ್, ರಂಗಾಯಣ ರಘು, ವೀಣಾ ಸುಂದರ್ ಮುಂತಾದವರಿದ್ದಾರೆ.
 

ರಾಮು ನಿರ್ಮಾಣದ ‘ಕಂಠೀರವ’ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ, ದಾಸರೀ ಸೀನು ಛಾಯಾಗ್ರಹಣ, ಚಕ್ರೀ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಪ್ರದೀಪ್ ಅಂತೋನಿ ನೃತ್ಯ, ನಂಜುಂಡಸ್ವಾಮಿ ಕಲೆ. ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ತುಷಾರ್ ರಂಗನಾಥ್. ತಾರಾಗಣದಲ್ಲಿ ವಿಜಯ್, ಶುಭಾ ಪೂಂಜ, ರಿಷಿಕಾ ಸಿಂಗ್, ಶ್ರಿನಿವಾಸಮೂರ್ತಿ, ಯಮುನಾ, ಮುಕೇಶ್ ರಿಷ್ಯಾ, ಸಾಧುಕೋಕಿಲ  ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT