ADVERTISEMENT

ಕಾಲಾಯತಸ್ಮೈನಮಃ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಮಾರುತಿ ಜೆಡಿ ನಿರ್ಮಾಣದ `ಕಾಲಾಯ ತಸ್ಮೈ ನಮಃ~ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಡುಗಳು ಹಾಗೂ ನಿರ್ದೇಶನ ಚಂದ್ರಶೇಖರ ಶ್ರಿ ವಾತ್ಸವ್ ಅವರದು. ಸಂಗೀತ ಎ.ಎಂ.ನೀಲ್, ಛಾಯಾಗ್ರಹಣ ಸಿನಿಟೆಕ್ ಸೂರಿ, ಸಂಕಲನ ಎಸ್.ಸೌಂದರ್ ರಾಜ್, ಸಾಹಸ  ಡಿಫರೆಂಟ್ ಡ್ಯಾನಿ, ಕಲೆ  ಶ್ರಿನಿವಾಸ್, ನಿರ್ವಹಣೆ  ಅಚ್ಚುತರಾವ್. ತಾರಾಗಣದಲ್ಲಿ ಯೋಗೀಶ್, ಮಧುಬಾಲಾ, ರಂಗಾಯಣ ರಘು, ರವಿಕಾಳೇ, ರಾಜು ತಾಳಿಕೋಟೆ, ಶಂಕರ್ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ, ಜಿ.ಎನ್.ನಿಶಾಂತ್, ಜಯಸಿಂಹ ಮುಸುರಿ, ನಾಗರಾಜ್ ಮೂರ್ತಿ ಮುಂತಾದವರಿದ್ದಾರೆ.

ಶೀಘ್ರ `ವಿಲನ್~ತೆರೆಗೆ     
ಯೋಗೀಶ್ ಹುಣಸೂರು ನಿರ್ಮಿಸಿರುವ `ವಿಲನ್~ ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದೆ. ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಆದಿತ್ಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ರಾಗಿಣಿ. ರಂಗಾಯಣ ರಘು, ಶೋಭರಾಜ್, ಮಾಲತಿ ಸರ್ ದೇಶಪಾಂಡೆ, ಸಿಮ್ರಾನ್, ಕಮಲ, ಅವಿನಾಶ್ ಮುಂತಾದವರು ಕಲಾವಿದರು. ಎಂ.ಎಸ್.ರಮೇಶ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT