ಬೆಂಗಳೂರು: ಸೌಜನ್ಯಾ ಹಾಗೂ ನಟ ವಿವೇಕ್ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಮದುವೆ ಮತ್ತಿತರ ಕಾರಣಗಳಿಗೆ ನಟಿ ಮನನೊಂದಿರಬಹುದು ಎಂದು ಹೇಳಲಾಗಿದೆ. ‘ವಿವೇಕ್ ನನ್ನ ಮಗಳಿಗೆ ಕಿರುಕುಳ ನೀಡಿರುವ ಸಾಧ್ಯತೆ ಇದೆ’ ಎಂದು ಪ್ರಭು ಮಾದಪ್ಪ ಆರೋಪಿಸಿದ್ದಾರೆ.
‘ವಿವೇಕ್ ಜೊತೆಗಿನ ಪ್ರೀತಿಗೆ ನಮ್ಮ ವಿರೋಧ ಇತ್ತು. ಆದರೆ ಮಗಳು ಎಂದೂ ನಮ್ಮಲ್ಲಿ ಈ ವಿಷಯ ಪ್ರಸ್ತಾಪ ಮಾಡಿರಲಿಲ್ಲ. ಈಚೆಗಷ್ಟೇ ದೊಡ್ಡ ಮಗಳ ಮದುವೆ ಮಾಡಿದ್ದೆವು. ಹಣದ ಕೊರತೆ ಇದ್ದ ಕಾರಣ ಸದ್ಯಕ್ಕೆ ಇನ್ನೊಬ್ಬ ಮಗಳ ಮದುವೆ ಬೇಡ ಎಂದುಕೊಂಡಿದ್ದೆವು. ಮಹೇಶ್ಗೆ ನನ್ನ ಮಗಳ ಎಲ್ಲ ವಿವರ ಗೊತ್ತಿತ್ತು’ ಎಂದು ಪ್ರಭು ಮಾದಪ್ಪ ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಈ ಕುರಿತು ನಟ ವಿವೇಕ್ ಪ್ರತಿಕ್ರಿಯಿಸಿ ‘ಸೌಜನ್ಯಾ ನನಗೆ ಕಳೆದೊಂದು ವರ್ಷದಿಂದ ಪರಿಚಯ. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದು ಆಗಾಗ್ಗೆ ಭೇಟಿ ಆಗುತ್ತಿದ್ದೆವು. ಆಕೆ ಮನಸ್ಸಿಗೆ ಬೇಜಾರಾದಾಗ ನನ್ನ ಜೊತೆ ಮಾತನಾಡುತ್ತಿದ್ದಳು. ಆಕೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳು ಗೊತ್ತಿಲ್ಲ. ಪೋಷಕರ ಆರೋಪದ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಪೊಲೀಸರ ತನಿಖೆಯಿಂದ ಎಲ್ಲ ಸತ್ಯ ಹೊರಬರಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.