ADVERTISEMENT

ಚಿತ್ರದುರ್ಗ | ಚಿತ್ರ ನಿರ್ದೇಶಕ ಹೇಮಂತ ನಾಯ್ಕ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 20:43 IST
Last Updated 29 ಜುಲೈ 2020, 20:43 IST
ಹೇಮಂತ ನಾಯ್ಕ್
ಹೇಮಂತ ನಾಯ್ಕ್   

ಹೊಳಲ್ಕೆರೆ: ತಾಲ್ಲೂಕಿನ ಹೊಳಲ್ಕೆರೆ ಲಂಬಾಣಿಹಟ್ಟಿಯ, ಚಲನಚಿತ್ರ ನಿರ್ದೇಶಕ ಹೇಮಂತ ನಾಯ್ಕ್ (27) ಮಂಗಳವಾರ ಸಂಜೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಂಬಾಣಿ ಭಾಷೆಯ ‘ಗೋರಿಯಾ’, ‘ಗರಸ್ಯ’ ಹಾಗೂ ಕನ್ನಡದ ‘ಧರ್ಮಾಪುರ’ ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಐದು ತಿಂಗಳ ಹಿಂದೆಯಷ್ಟೇ ಇವರ ಪತ್ನಿ, ಒಂದು ವರ್ಷದ ಮಗು ಜೊತೆ ಆತ್ಮಹತ್ಯೆ ಮಾಡಿಕೊಂಡಿ ದ್ದರು. ಇದರಿಂದ ಆದ ಮಾನಸಿಕ ನೋವು ಹಾಗೂ ಈಚೆಗೆ ನಿರ್ದೇಶಿಸಿದ್ದ ‘ದಾರಿದೀಪ’ ಸಿನಿಮಾ ಬಿಡುಗಡೆ ಆಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.