ADVERTISEMENT

ರಾಜ್‌ ಸಾಧನೆಗೆ ಶಕ್ತಿಯಾಗಿದ್ದ ವರದಪ್ಪ: ನಟ ರಾಘವೇಂದ್ರ ರಾಜಕುಮಾರ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:22 IST
Last Updated 13 ಫೆಬ್ರುವರಿ 2021, 19:22 IST
ಕಾರ್ಯಕ್ರಮದಲ್ಲಿ ರಂಗಭೂಮಿ ಕ್ಷೇತ್ರದ ಕುಕನೂರು ಬಾಬಣ್ಣ ಹಾಗೂ ಚಲನಚಿತ್ರ ಕ್ಷೇತ್ರದ ಸುರೇಖಾ ಅವರಿಗೆ ಎಸ್‌.ಪಿ. ವರದರಾಜು ಪ್ರಶಸ್ತಿ ಪ್ರದಾನ ಮಾಡಲಾಯಿತು. (ಎಡದಿಂದ ನಿಂತವರು) ಗಾಯಕಿ ಶಮಿತಾ ಮಲ್ನಾಡ್‌, ನಟ ದೊಡ್ಡಣ್ಣ, ರಾಘವೇಂದ್ರ ರಾಜಕುಮಾರ್‌, ಸಾಹಿತಿ ಬರಗೂರು ರಾಮಚಂದ್ರಪ್ಪ, ನಟಿ ಸುಧಾರಾಣಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ರಂಗಭೂಮಿ ಕ್ಷೇತ್ರದ ಕುಕನೂರು ಬಾಬಣ್ಣ ಹಾಗೂ ಚಲನಚಿತ್ರ ಕ್ಷೇತ್ರದ ಸುರೇಖಾ ಅವರಿಗೆ ಎಸ್‌.ಪಿ. ವರದರಾಜು ಪ್ರಶಸ್ತಿ ಪ್ರದಾನ ಮಾಡಲಾಯಿತು. (ಎಡದಿಂದ ನಿಂತವರು) ಗಾಯಕಿ ಶಮಿತಾ ಮಲ್ನಾಡ್‌, ನಟ ದೊಡ್ಡಣ್ಣ, ರಾಘವೇಂದ್ರ ರಾಜಕುಮಾರ್‌, ಸಾಹಿತಿ ಬರಗೂರು ರಾಮಚಂದ್ರಪ್ಪ, ನಟಿ ಸುಧಾರಾಣಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುತ್ತುರಾಜ ಎಂಬ ದೀಪವು ಪ್ರಕಾಶಮಾನವಾಗಿ ಬೆಳಗಲು ವರದರಾಜು ಎಂಬ ಎಣ್ಣೆಯು ಅದ್ಭುತ ಶಕ್ತಿಯಾಗಿ ಕೆಲಸ ಮಾಡಿತ್ತು’ ಎಂದು ಹಿರಿಯ ನಟ ರಾಘವೇಂದ್ರ ರಾಜಕುಮಾರ್‌ ತಿಳಿಸಿದರು.

ಎಸ್‌.ಪಿ.ವರದರಾಜು ಆತ್ಮೀಯರ ಬಳಗವು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಕನೂರು ಬಾಬಣ್ಣ
(ರಂಗಭೂಮಿ) ಹಾಗೂ ಸುರೇಖಾ (ಚಲನಚಿತ್ರ ಕ್ಷೇತ್ರ) ಅವರಿಗೆ ಎಸ್‌.ಪಿ.ವರದರಾಜು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಅವರು ‘ರಾಜಕುಮಾರ್‌ ಮತ್ತು ವರದ
ರಾಜು ರಾಮ–ಲಕ್ಷ್ಮಣರಂತಿದ್ದರು. ಅಪ್ಪಾಜಿಯವರು ಅಭಿನಯಿಸಿದ ಎಲ್ಲಾ ಚಿತ್ರಗಳು ಭಾರಿ ಯಶಸ್ಸು ಗಳಿಸುವಲ್ಲಿ ವರದಪ್ಪಣ್ಣನವರ ಕಾಣಿಕೆಯೂ ಇತ್ತು’ ಎಂದರು.

ADVERTISEMENT

‘ವರದರಾಜು ಅವರು ಅಜಾತಶತ್ರುವಾಗಿದ್ದರು. ಕಥೆಯ ಆಯ್ಕೆಯ ವಿಚಾರದಲ್ಲಿ ಅವರಿಗೆ ಅಗಾಧ ಜ್ಞಾನವಿತ್ತು. ಯಾವ ಪಾತ್ರಕ್ಕೆ ಯಾರು ಜೀವ ತುಂಬಬಲ್ಲರು ಎಂಬುದನ್ನು ನಿರ್ಣಯಿಸಿ ಅಂತಹ ಕಲಾವಿದರನ್ನೇ ಆಯ್ಕೆಮಾಡುತ್ತಿದ್ದರು. ರಾಜಕುಮಾರ್‌ ಅಭಿನಯದ ಚಿತ್ರಗಳು ಶೇಕಡ 100ರಷ್ಟು ಯಶಸ್ಸು ಕಾಣಲು ಇದೇ ಕಾರಣ’ ಎಂದು ಹಿರಿಯ ನಟ ದೊಡ್ಡಣ್ಣ ತಿಳಿಸಿದರು.

‘ನಾನು ಚಿತ್ರರಂಗದ ಯಶಸ್ವಿ ನಟಿಯಾಗಿ ಬೆಳೆಯಲು ರಾಜಕುಮಾರ್‌ ಮತ್ತು ಪಾರ್ವತಮ್ಮನವರು ಕಾರಣ. ನನ್ನ ಯಶಸ್ಸಿನಲ್ಲಿ ವರದಪ್ಪಣ್ಣನವರ ಪಾತ್ರವೂ ಇದೆ’ ಎಂದು ನಟಿ ಸುಧಾರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.