ಶಹಾಪುರ: ‘ಗ್ರಾಮೀಣ ಭಾಗದ ಕಲಾವಿದರ ತಂಡ ಸಿದ್ಧಪಡಿಸಿರುವ ಹುಲಿಬೇಟೆ ಸಿನಿಮಾ ಶತನೋತ್ಸವ ಆಚರಿಸಲಿ. ನಾವೆಲ್ಲರೂ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸೋಣ ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ದೋರನಹಳ್ಳಿ ವೀರಮಹಾಂತ ಶಿವಾಚಾರ್ಯರು ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಧಾನಬಾಯಿ ಶಿವಶಂಕರ್ ಚವ್ಹಾಣ ಬ್ಯಾನರ್ ಅಡಿ ನಿರ್ಮಾಣವಾದ ಹುಲಿಬೇಟೆ ಸಿನಿಮಾದ ಟ್ರೈಲರ್ ಹಾಗೂ ಹಾಡು ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಿತ್ತುಹಾಕೋಣ, ನಮ್ಮ ಭಾಗದ ಪ್ರತಿಭಾವಂತ ಕಲಾವಿದರು ಎಲ್ಲಾ ಕ್ಷೇತ್ರದಲ್ಲಿ ದಾಪುಗಲು ಹಾಕುತ್ತಿರುವುದು ಖುಷಿಯ ಸಂಗತಿಯಾಗಿದೆ. ಚಿತ್ರ ನಿರ್ಮಾಣ ಸಣ್ಣ ಕೆಲಸವಲ್ಲ. ಅದಕ್ಕೆ ಸಾಕಷ್ಟು ಬಂಡವಾಳ ಬೇಕು, ನುರಿತ ತಜ್ಞರ ತಂಡ ಹೀಗಿ ಹಲವಾರು ಮಜಲುಗಳನ್ನು ದಾಟಿ ಹುಲಿಬೇಟೆ ಜನವರಿಯಲ್ಲಿ ನಮ್ಮ ಮುಂದೆ ಬರಲಿದೆ ಎಂದರು.
ಚಿತ್ರದ ನಿರ್ಮಾಪಕಿ ಧಾನಾಬಾಯಿ, ಶಹಾಪುರ ಠಾಣೆಯ ಪಿ.ಐ ಶ್ರೀನಿವಾಸ ಅಲ್ಲಾಪುರೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ ಸಂಕೀನ್, ಡಾ.ಚಂದ್ರಶೇಖರ ಸುಬೇದಾರ, ನಟ ವಿಶಾಲ ದೋರನಹಳ್ಳಿ, ಕಸಾಪ ಅಧ್ಯಕ್ಷ ಡಾ.ರವೀಂದ್ರ ಹೊಸಮನಿ,ಡಾ.ಬಸವರಾಜ ಇಜೇರಿ, ಶರಣು ಗದ್ದುಗೆ, ಮಾನಸಿಂಗ್ ಚವ್ಹಾಣ, ನೀಲಕಂಠ ಬಡಿಗೇರ, ಶಿವಲಿಂಗಣ್ಣ ಸಾಹು, ಶಾಂತಪ್ಪ ಕಟ್ಟಿಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.