ಮೈಸೂರು: ಕನ್ನಡದ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪಂಕಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಂಕಜ್ ಅವರು ರಕ್ಷಾ ಎಂಬುವರ ಜೊತೆ ಮೈಸೂರಿನಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಕೋವಿಡ್ ಪರಿಣಾಮ ನಾರಾಯಣ್ ಅವರು, ಕುಟುಂಬದರು, ಆಪ್ತರು ಮತ್ತು ಗೆಳೆಯರಿಗೆ ಮಾತ್ರ ಕರೆಯೊಲೆ ನೀಡಿದ್ದರು ಎನ್ನಲಾಗಿದೆ.
ಪಂಕಜ್ ಅವರು ಕನ್ನಡದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ವಿವಾಹದ ಬಳಿಕವೂ ಸಿನಿ ಪಯಣ ಮುಂದುವರೆಸಲಿದ್ದಾರೆ ಎಂದು ಪಂಕಜ್ ತಿಳಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.