‘ಅಯ್ಯೋ ಅಯ್ಯೋ ಅಯ್ಯೋ... ಮಚ್ಚು ಎಳ್ದೇ ಬಿಟ್ಯಲ್ಲೋ... ಯಾರು ಎಲ್ಲೇ ಮಚ್ಚು ಎಳೆದರೂ ಆ ಸೌಂಡ್ ಕೇಳ್ಸೋದು ಒಬ್ನಿಗೆ... ಅಲ್ನೋಡು ಬಂದೇ ಬಿಟ್ಟ’ ಹೀಗೆನ್ನುವ ಡೈಲಾಗ್ ನಡುವೆಯೇ ‘ದಿ ವಿಲನ್’ ಸಿನಿಮಾದ ಟೀಸರ್ನಲ್ಲಿ ನಟ ಶಿವರಾಜ್ಕುಮಾರ್ ಅವರು ತೆರೆಯ ಮೇಲೆ ಬರುವ ದೃಶ್ಯವೊಂದಿದೆ. ಇದು ಶಿವರಾಜ್ಕುಮಾರ್ ಚಂದನವನದಲ್ಲಿ ಹುಟ್ಟುಹಾಕಿದ ಮಚ್ಚಿನ ಟ್ರೆಂಡ್ಗೆ ಸಾಕ್ಷಿ.
ಇದೀಗ ಶಿವರಾಜ್ಕುಮಾರ್ ಅವರು ಚಂದನವನಕ್ಕೆ ಹೆಜ್ಜೆ ಇಡುತ್ತಿರುವ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರಿಗೂ ಸಿನಿಮಾದಲ್ಲಿ ಮಚ್ಚು ಹಿಡಿದು ಅಭಿನಯಿಸುವ ತರಬೇತಿಯನ್ನು ನೀಡಿದ್ದಾರೆ.‘ಅಧ್ಯಕ್ಷ’, ‘ರನ್ನ’, ‘ಪೊಗರು’ನಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ನಂದ ಕಿಶೋರ್ ಅವರ ನಿರ್ದೇಶನದ ಸಿನಿಮಾ ‘ರಾಣ’ದಲ್ಲಿ ಶ್ರೇಯಸ್ ನಾಯಕ. ಇತ್ತೀಚೆಗೆ ಚಿತ್ರತಂಡವು ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದಾಗ ಚಿತ್ರ ತಂಡಕ್ಕೆ ಶುಭಕೋರಿದ ಅವರು, ಶ್ರೇಯಸ್ಗೆ ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮೆರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ.
ಗುಜ್ಜಲ್ ಪುರುಶೋತ್ತಮ್ ನಿರ್ಮಾಣದ ‘ರಾಣ’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದು, ಶೇಖರ್ ಚಂದ್ರು ಛಾಯಾಗ್ರಹಣವಿದೆ. ನಾಯಕಿಯಾಗಿ ರೇಶ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.