ಮಯೂರ ಮೌಂಟನ್ ಪಿಕ್ಚರ್ಸ್ ಲಾಂಛನದಲ್ಲಿ ಡಿ. ಮಂಜುನಾಥ್ ನಿರ್ಮಿಸುತ್ತಿರುವ ‘ವೀಕ್ ಎಂಡ್’ ಚಿತ್ರದ ಮುಹೂರ್ತ ಈಚೆಗೆ ಶ್ರೀಬನಗಿರಿ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು.
ನಾಯಕ, ನಾಯಕಿ ಒಬ್ಬರನ್ನೊಬ್ಬರು ನೋಡುವ ಪ್ರಥಮ ಸನ್ನಿವೇಶಕ್ಕೆ ‘ಉದ್ಘರ್ಷ’ ಚಿತ್ರದ ನಿರ್ಮಾಪಕರಾದ ಆರ್. ದೇವರಾಜ್ ಚಾಲನೆ ನೀಡಿದರು. ಮುಹೂರ್ತ ಆರಂಭದ ದಿನಂದಿದಲೇ ಚಿತ್ರಕ್ಕೆ ಬೆಂಗಳೂರಿನ ಹಲವೆಡೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲೂ ಚಿತ್ರೀಕರಣ ನಡೆಯಲಿದೆಯಂತೆ.
ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಅವರ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸಹ ನಿರ್ದೇಶನಮಂಜುನಾಥ್ ಜಂಬೆ ಹೊತ್ತಿದ್ದರೆ,ಯೋಗಾನಂದ್ ಅವರದ್ದು ನಿರ್ಮಾಣ ನಿರ್ವಹಣೆ.
ಚಿತ್ರದಲ್ಲಿ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಒಂದು ಚೇಸಿಂಗ್ ದೃಶ್ಯವಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇಪ್ಪತ್ತಕ್ಕೂ ಅಧಿಕ ಜನರನ್ನು ನಾಯಕ ಹಾಗೂ ನಾಯಕಿ ಪಾತ್ರಕ್ಕಾಗಿ ಆಡಿಷನ್ ಮಾಡಲಾಗಿತ್ತು. ಮಿಲಿಂದ್ ಅವರನ್ನು ನಾಯಕನ ಪಾತ್ರಕ್ಕೆ ಹಾಗೂ ಸಂಜನಾ ಬುರ್ಲಿ ಅವರನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಹಿರಿಯ ನಟ ಅನಂತನಾಗ್ ಸಹ ಈ ಚಿತ್ರದಲ್ಲಿದ್ದು, ಗೋಪಿನಾಥ್ ಭಟ್, ಅವಿನಾಶ್, ನಾಗಭೂಷಣ್, ನೀನಾಸಂ ರಘು ಮುಂತಾದವರಿಂದ ಕೂಡಿದ ತಾರಾಬಳಗವೇ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.