ADVERTISEMENT

ನಟ ವಿಷ್ಣುವರ್ಧನ್‌ ಪುತ್ಥಳಿ ನಿರ್ಮಿಸಲು ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 12:20 IST
Last Updated 2 ಫೆಬ್ರುವರಿ 2019, 12:20 IST
ಮಾಗಡಿಯಲ್ಲಿ ನಟ ವಿಷ್ಣುವರ್ಧನ್‌ ಪುತ್ಥಳಿ ಸ್ಥಾಪನೆಗೆ ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ಭೂಮಿ ಪೂಜೆ ನಡೆಸಿದರು. ಇಮ್ಮಡಿ ಬಸವರಾಜ ಸ್ವಾಮಿ, ಕೆ.ಕೃಷ್ಣಮೂರ್ತಿ, ಮಹಂತೇಶ್‌ ಇದ್ದರು.
ಮಾಗಡಿಯಲ್ಲಿ ನಟ ವಿಷ್ಣುವರ್ಧನ್‌ ಪುತ್ಥಳಿ ಸ್ಥಾಪನೆಗೆ ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ಭೂಮಿ ಪೂಜೆ ನಡೆಸಿದರು. ಇಮ್ಮಡಿ ಬಸವರಾಜ ಸ್ವಾಮಿ, ಕೆ.ಕೃಷ್ಣಮೂರ್ತಿ, ಮಹಂತೇಶ್‌ ಇದ್ದರು.   

ಮಾಗಡಿ: ಪಟ್ಟಣದ ಸರ್ಕಾರಿ ಬಸ್‌ ನಿಲ್ದಾಣದ ಬಳಿ ರಸ್ತೆ ಬದಿ ನಟ ವಿಷ್ಣುವರ್ಧನ್‌ ಪುತ್ಥಳಿ ನಿರ್ಮಾಣಕ್ಕೆ ವಿಷ್ಣುಸೇನೆ ವತಿಯಿಂದ ಭೂಮಿ ಪೂಜೆ ನಡೆಯಿತು.

ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮಿ, ಬಿಜೆಪಿ ಮುಖಂಡರಾದ ಎ.ಎಚ್‌. ಬಸವರಾಜು, ಮಾರಪ್ಪ ದೊಂಬಿದಾಸ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಹಾಲು ತುಪ್ಪ ಎರೆದು ಪೂಜೆ ಸಲ್ಲಿಸಿದರು.

ವಿಷ್ಣು ಸೇನಾ ಸಮಿತಿಯ ಮಹಂತೇಶ್‌, ಜಗದೀಶ್‌, ಜಯ ಕರ್ನಾಟಕದ ಡಿ.ಜಿ. ಕುಮಾರ್‌, ತೋಟದಮನೆ ಗಿರೀಶ್‌, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್‌, ಗ್ರಾಮ ಪಂಚಾಯಿತಿ ಸದಸ್ಯ ರಂಗಣ್ಣ, ಜಿಲ್ಲಾ ಸವಿತಾ ಸಮಾಜದ ಮುಖಂಡ ಮುನಿಕೃಷ್ಣ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.