ಕುರ್ಚಿಗಾಗಿ ಸಚಿವ ರೈ ಪರದಾಟ... ರಾಜ್ಯಪಾಲರ ಭಾಷಣದ ವೇಳೆ ಸಚಿವರಿಗಾಗಿ ಮೀಸಲಾಗಿದ್ದ ಸ್ಥಾನದಲ್ಲಿ ಜೆಡಿಎಸ್ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್ ಅಹಮದ್ ಕುಳಿತಿದ್ದರು. ಸದನಕ್ಕೆ ಬಂದ ಸಚಿವ ರಮಾನಾಥರೈ ಆಸನ ಬಿಟ್ಟುಕೊಡುವಂತೆ ಕೋರಿದರು(ಚಿತ್ರ 1). ಆಸನ ಬಿಟ್ಟುಕೊಡದೇ ಇದ್ದಾಗ, ನನಗೆ ಮೀಸಲಾದ ಆಸನವೇ ಎಂದು ರೈ ಪರೀಕ್ಷಿಸಿದರು(ಚಿತ್ರ 2). ಜಮೀರ್ ಮತ್ತೆ ಮಾತಿನಲ್ಲಿ ತಲ್ಲೀನರಾದಾಗ, ನಿಂತು ಪ್ರಯೋಜನವಿಲ್ಲ ಎಂದು ಗೊತ್ತಾದ ರೈ, ಹಿಂದಿನ ಸಾಲಿನ ಆಸನವನ್ನೇ ಆಯ್ದುಕೊಂಡರು –-ಚಿತ್ರ: ವಿಶ್ವನಾಥ ಸುವರ್ಣ
ವಿಧಾನಮಂಡಲ ಜಂಟಿ ಅಧಿವೇಶನವನ್ನು ಅಲ್ಪಕಾಲ ಮುಂದೂಡಿದ ಸಮಯದಲ್ಲಿ ಶಾಸಕಿಯರಾದ ಶಕುಂತಲಾ ಶೆಟ್ಟಿ, ರಾಮಕ್ಕ, ಶಾರದಾ ಮೋಹನ ಶೆಟ್ಟಿ, ಶಶಿಕಲಾ ಜೊಲ್ಲೆ, ವಿನಿಶಾ ನಿರೊ, ಜಯಮ್ಮ ಅವರು ಸಮಾಲೋಚನೆಯಲ್ಲಿ ತೊಡಗಿದ್ದರು