ADVERTISEMENT

ದಿನ ಭವಿಷ್ಯ: ಈ ರಾಶಿಯ ಉದ್ಯಮಿಗಳಿಗೆ ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮಾನಸಿಕ ತೊಂದರೆಗಳು ಎದುರಾಗಬಹುದು, ಆದರೆ, ಯಾವುದೇ ರೀತಿಯ ದೊಡ್ಡ ಸಮಸ್ಯೆ ಉಂಟಾಗುವ ಪರಿಸ್ಥಿತಿ ಕಂಡುಬರುವುದಿಲ್ಲ. ಕೈಯಲ್ಲಿ ಹಣ ಇರುವುದರಿಂದ ಬಾಕಿ ಇರಿಸಿದ ಕೆಲಸಗಳ ಬಗ್ಗೆ ಗಮನಹರಿಸಿ. ‌
  • ವೃಷಭ
  • ವಿವಾಹಾಪೇಕ್ಷಿಗಳಿಗೆ ಅನಿರೀಕ್ಷಿತವಾಗಿ ಸಹೋದರನ ಮುಖಾಂತರವಾಗಿ ವೈವಾಹಿಕ ಸಂಬಂಧವೊಂದು ಕೂಡಿ ಬರಲಿದೆ. ಕಾರ್ಖಾನೆಯ ವಿದ್ಯುತ್ ಲೋಪಗಳನ್ನು ಸರಿಪಡಿಸಲು ಅಧಿಕ ವೆಚ್ಚವಾಗುವುದು.
  • ಮಿಥುನ
  • ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಹೆಚ್ಚಿನ ಕೆಲಸಗಳು ತೋರಿಬರಲಿದೆ. ಟ್ರಾವೆಲ್ ಏಜೆನ್ಸಿಯನ್ನು ನಡೆಸುವವರಿಗೆ ಉತ್ತಮವಾಗಿ ಇರಲಿದೆ. ಮನೆಯ ಅಲಂಕಾರಗಳಿಗೆ ಹೇರಳ ಹಣ ವ್ಯಯಿಸುವಿರಿ.
  • ಕರ್ಕಾಟಕ
  • ನಿರ್ದಾಕ್ಷಿಣ್ಯ ಕಾರ್ಯವೈಖರಿಯಿಂದ ಅಧಿಕಾರಿಗಳಿಗೂ ನಿಮಗೂ ಸಂಪರ್ಕ ದೂರಾಗುವಂತಾಗಲಿದೆ. ಸ್ನೇಹಿತರೊಬ್ಬರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವ ಸಂಭವ ಬರಬಹುದು.
  • ಸಿಂಹ
  • ವೃತ್ತಿರಂಗದಲ್ಲಿ ಸಂದರ್ಭೋಚಿತವಾಗಿ ವರ್ತಿಸುವುದರಿಂದ ಲಾಭವಾಗಬಹುದು. ಈ ದಿನದ ನಿಮ್ಮ ವರ್ತನೆ ನಾಳೆಯ ದಿನ ಕಾಪಾಡಿಕೊಳ್ಳುವುದು ಕಷ್ಟ . ಹಿರಿಯರ ಆಸ್ತಿ ಸ್ವತ್ತುಗಳು ನಿಮ್ಮ ಪಾಲಿಗೆ ಬರಲಿವೆ.
  • ಕನ್ಯಾ
  • ಎಲ್ಲಾ ದಾರಿಗಳೂ ಸುಗಮ ಎನಿಸಿ ಎಲ್ಲಾ ಕಷ್ಟ ನಷ್ಟಗಳೂ ನಿವಾರಣೆ ಯಾಗುವ ಹಂತ ತಲುಪುವುದು. ಈ ದಿನದಲ್ಲಾದ ಹೊಸ ಜನರ ಸಂಪರ್ಕವು ಉತ್ತಮ ಧನಲಾಭ ತರಲಿದೆ. ವ್ಯಾಸಂಗಕ್ಕಾಗಿ ಹಣದ ವ್ಯವಸ್ಥೆ ಆಗುವುದು.
  • ತುಲಾ
  • ಗೆಳೆಯರ ಗುಂಪಿನಲ್ಲಿ ಮಿತ್ರತ್ವ ಹಾಗೂ ಶತ್ರುತ್ವ ಹೊಂದಿದವರು ಇರುತ್ತಾರೆಂದು ಮರೆಯದಿರಿ. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿಬರುತ್ತದೆ. ಏಕಾಗ್ರತೆಗೆ ಭಂಗವಾಗಲಿದೆ.
  • ವೃಶ್ಚಿಕ
  • ಮಕ್ಕಳ ಜತೆ ಸಂತೋಷದಿಂದ ಸಮಯ ಕಳೆಯಲು ಕೆಲ ನಿರ್ಧಾರ ಕೈಗೊಳ್ಳುವಿರಿ. ಆದಾಯಕ್ಕೆ ತಕ್ಕ ಜೀವನ ರೂಪಿಸಿಕೊಳ್ಳುವಲ್ಲಿ ಸಮರ್ಥರಾಗುವಿರಿ. ಗ್ರಂಥ ಪಾಲಕರ ಹುದ್ದೆ ಸಿಕ್ಕರೆ ಶುಭವಾಗುವುದು.
  • ಧನು
  • ಗೃಹದಲ್ಲಿ ಹೊಂದಾಣಿಕೆಯ ಕೊರತೆಯಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮೂಡಿಬಂದು ದುಗುಡುತನ ಹೆಚ್ಚಾಗಲಿದೆ. ವ್ಯವಹಾರದಲ್ಲಿ ವಂಚನೆಯ ಸಾಧ್ಯತೆ ಇರುವುದರಿಂದ ಜಾಗರೂಕತೆಯಿಂದ ವ್ಯವಹರಿಸಿ.
  • ಮಕರ
  • ಸೋಮಾರಿತನ ಇಲ್ಲದೆ ದುಡಿಯಿರಿ, ಆದರೆ ಸಂಪಾದನೆಯ ಮಾರ್ಗ ದೇವರು ಮೆಚ್ಚುವ ರೀತಿಯಲ್ಲಿ ಇರಲಿ. ಕೆಲಸದಿಂದ ಹಿಂತಿರುಗುವ ಆಲೋಚನೆಗಳು ಸರಿಯಲ್ಲ. ಇಂದು ಕೆಲಸಗಳು ಏರುಪೇರಾಗಲಿದೆ.
  • ಕುಂಭ
  • ವೃತ್ತಿರಂಗದಲ್ಲಿ ಸಾಮರ್ಥ್ಯ ಈ ದಿನ ಹೆಚ್ಚೇನು ಪ್ರಯೋಜಕಾರಿಯಾಗುವುದಿಲ್ಲ, ಆದ್ದರಿಂದ ಮನುಷ್ಯ ಪ್ರಯತ್ನದ ಜೊತೆಯಲ್ಲಿ ದೇವಬಲವು ಅಗತ್ಯ ಎನ್ನುವ ಕಾರಣದಿಂದಾಗಿ ದೇವರ ಮೊರೆ ಹೋಗುವುದು ಉತ್ತಮ.
  • ಮೀನ
  • ಉದ್ಯಮಿಗಳಿಗೆ ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭವು ಪ್ರಾಪ್ತಿ. ಆಹಾರದ ಬಳಕೆಯಲ್ಲಿ ನಿಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಿಸಿ. ಸಮಸ್ಯೆಯನ್ನು ಎದುರಿಸುವ ಬಗ್ಗೆ ಯೋಚಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.