ADVERTISEMENT

ದಿನ ಭವಿಷ್ಯ: ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಈ ದಿನ ಶುಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಸೆಪ್ಟೆಂಬರ್ 2025, 18:30 IST
Last Updated 24 ಸೆಪ್ಟೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ತೆಗೆದುಕೊಂಡ ಹೊಸ ನಿರ್ಧಾರಕ್ಕೆ ಗ್ರಹಣದ ಛಾಯೆ ಎದುರಾಗಬಹುದು. ದುರ್ಗಾದೇವಿಯ ಆರಾಧನೆ ಮನಸ್ಸಿಗೆ ನೆಮ್ಮದಿ ಉಂಟುಮಾಡುವುದು.
  • ವೃಷಭ
  • ಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯಲಿವೆ. ಯಾವ ಕೆಲಸದಲ್ಲೂ ಅಡೆತಡೆಗಳೇನೂ ಇರದು. ಕುಟುಂಬದ ಸಂತೋಷ ವೃದ್ಧಿಯಾಗುವುದು.
  • ಮಿಥುನ
  • ಕೆಲಸದ ಒತ್ತಡ, ಸಮಯ, ಜವಾಬ್ದಾರಿಗಳು ಹೆಚ್ಚಲಿವೆ. ಏಕಾಂಗಿತನದಲ್ಲಿರುವವರು ಇತರರೊಂದಿಗೆ ಜೊತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜತೆಯಲ್ಲಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
  • ಕರ್ಕಾಟಕ
  • ಕೆಲಸಗಳ ಬಗ್ಗೆ ಪುನರಾವಲೋಕನ ಮಾಡುವಂಥ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ಪ್ರಥಮ ದರ್ಜೆಯ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಈ ದಿನ ಶುಭ.
  • ಸಿಂಹ
  • ಶಸ್ತ್ರಚಿಕಿತ್ಸಾ ವೈದ್ಯರಿಗೆ ಪ್ರಶಂಸೆಯ ಮಾತುಗಳು ಕೇಳಿ ಬರಲಿವೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ಗಂಟಲುಬೇನೆ ಎದುರಾಗಬಹುದು.
  • ಕನ್ಯಾ
  • ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಿದವರು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿ. ಕಾರ್ಯರಂಗದಲ್ಲಿ ಅಪವಾದದ ಭೀತಿ ಎದುರಾಗಿ ಕಳವಳ ಮೂಡಿಸಲಿದೆ. ಶುದ್ಧಹಸ್ತರಾಗಿ ಕೆಲಸ ನಿರ್ವಹಿಸಿ.
  • ತುಲಾ
  • ವಿದೇಶ ವ್ಯಾಸಂಗದ ಅಭಿಲಾಷಿಗಳಿಗೆ ಶುಭ ಸುದ್ದಿ ಕೇಳಲಿದ್ದೀರಿ. ಹೊಸ ಹುದ್ದೆಯಲ್ಲಿ ಗೌರವ, ಸಂತೋಷ ಮತ್ತು ಹೊಸ ರೀತಿಯ ಅನುಭವ ದೊರೆಯುವುದು. ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.
  • ವೃಶ್ಚಿಕ
  • ಮನೆಯಲ್ಲಿ ನಡೆಯಬೇಕಿರುವ ಶುಭ ಕಾರ್ಯಕ್ಕೆ ಬಂಧುಗಳ ಆಗಮನವು ಸಂತೋಷವನ್ನು ಸೃಷ್ಟಿಸಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಂಭವವಿದೆ. ಕೃಷಿಗೆ ಸಂಬಂಧಪಟ್ಟ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ.
  • ಧನು
  • ಹಣ ಮತ್ತು ಗೌರವ ಎರಡರಲ್ಲಿ ಒಂದನ್ನು ಸಂಪಾದಿಸಬಹುದು, ತೀರ್ಮಾನ ನಿಮ್ಮದ್ದಾಗಿರುತ್ತದೆ. ಆರ್ಥಿಕ ಸಂಪತ್ತಿಗಿಂತ ಜನಸಂಪತ್ತು ಮುಖ್ಯವೆಂಬುದನ್ನು ಮರೆಯದಿರಿ. ಹೊಸ ಬಂಡವಾಳ ಹೂಡಿಕೆಗೆ ಉತ್ತಮ ಸಮಯ.
  • ಮಕರ
  • ಕರ್ತವ್ಯನಿಷ್ಠೆಯ ಗುಣದಿಂದ ಹೆಚ್ಚು ಹೆಸರುವಾಸಿಯಾಗುವಿರಿ. ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆ ಪ್ರಾಪ್ತಿಯಾಗುವುದು. ಅವಿವಾಹಿತರಿಗೆ ಕಂಕಣ ಯೋಗ.
  • ಕುಂಭ
  • ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಸಹೋದರರಿಗೋಸ್ಕರವಾಗಿ ತ್ಯಾಗ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ. ಅನವಶ್ಯಕವಾಗಿ ಚಿಂತಿಸದಿರಿ.
  • ಮೀನ
  • ಕೌಟುಂಬಿಕವಾಗಿ ಕೆಟ್ಟುಹೋದಂತಹ ಸಂಬಂಧಗಳು ದೇವತಾನು ಗ್ರಹದಿಂದ ಮರಳಿ ಸರಿಯಾಗಬಹುದು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಪೇಕ್ಷಿತ ಜಯವನ್ನು ಹೊಂದುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.