ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರುವರು. ತಂದೆಯ ಮಾತಿನಂತೆ ನಡೆಯುವುದು ಉತ್ತಮ. ಉದ್ಯೋಗ ದೊರೆತು ಮನೆಯವರಿಗೆ ಸಮಾಧಾನವಾಗುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ.
ವೃಷಭ
ದೇವಾಲಯಕ್ಕೆ ಪ್ರಯಾಣ ಮಾಡಬೇಕಾಗುವುದು. ಕುಟುಂಬದಲ್ಲಿ ಎಲ್ಲರ ಆರೋಗ್ಯವೂ ಉತ್ತಮವಾಗಿರುವುದು. ಸಿವಿಲ್ ಎಂಜಿನಿಯರ್ಗಳಿಗೆ ಹೆಚ್ಚು ಲಾಭ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ತೃಪ್ತಿಯಿರಲಿದೆ.
ಮಿಥುನ
ಪೋಷಕರ ಮಾತಿನಂತೆ ದೇವತಾ ಕಾರ್ಯಗಳನ್ನು ನಡೆಸುವ ಕುರಿತು ಯೋಜನೆಯನ್ನು ಕೈಗೊಳ್ಳುವಿರಿ. ಮೂರನೇ ವ್ಯಕ್ತಿ ಅವ್ಯವಹಾರ ಮಾಡುವುದರ ಬಗ್ಗೆ ಗಮನಹರಿಸಿ ಪಾಲುದಾರರೊಂದಿಗೆ ಮಾತುಕತೆ ನಡೆಸಿ.
ಕರ್ಕಾಟಕ
ವಿವಾಹದ ವಿಷಯದಲ್ಲಿ ನಿಮ್ಮ ಆಸೆ-ಆಕಾಂಕ್ಷೆಯನ್ನು ಕುಟುಂಬದ ಗಮನಕ್ಕೆ ತರುವುದು ಉತ್ತಮ. ಕೃಷಿ ಸಂಬಂಧಿತ ಕಾರ್ಯಗಳು ಈ ದಿನ ಬಿಡುವಿಲ್ಲದೆ ನಡೆಯಲಿದೆ. ಹಣಕಾಸಿನ ಕೊರತೆ ಇರುವುದಿಲ್ಲ.
ಸಿಂಹ
ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಪ್ರಯತ್ನ ಪಡಬೇಕಾಗುವುದು. ಮನೆಯಲ್ಲಿನ ಆಂತರಿಕ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಹಲ್ಲು ನೋವು ಸಂಭವಿಸಿ ವೈದ್ಯರನ್ನು ಸಂಪರ್ಕಿಸಬೇಕಾಗಲಿದೆ.
ಕನ್ಯಾ
ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕ ಅನುಕೂಲವಾಗಲಿದೆ. ಸಾಮಾಜಿಕ ಬದುಕಿನಲ್ಲಿ ಹುರುಪು ಕಾಣಲಿದ್ದೀರಿ. ಲೇವಾದೇವಿ ವ್ಯವಹಾರಗಳು ಉತ್ತಮವಾಗಿರುವುದು. ದೇವತಾಕಾರ್ಯಗಳಿಂದ ನೆಮ್ಮದಿ ಸಿಗುತ್ತದೆ.
ತುಲಾ
ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರಿಗಳಿಗೆ ಮಾರಾಟ ಜೋರು. ಮಕ್ಕಳಿಗೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸುವಂತೆ ತಿಳಿ ಹೇಳಬೇಕಾಗುವುದು. ಆಸ್ತಿ ಕೊಳ್ಳುವ ವಿಷಯದಲ್ಲಿ ಹೆಂಡತಿಯೊಂದಿಗೆ ಮಾತುಕತೆ ನಡೆಸಿ.
ವೃಶ್ಚಿಕ
ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ನೀವು ಸುಲಭವಾಗಿ ಸ್ಥಾನಗಳಿಸುವಿರಿ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ.
ಧನು
ನಿರೀಕ್ಷಿಸಿದ್ದ ಉದ್ಯೋಗ ಸಿಕ್ಕದಿದ್ದರೂ, ಸಣ್ಣ ಮಟ್ಟಿನ ಉದ್ಯೋಗ ಸಿಕ್ಕಿರು ವುದಕ್ಕೆ ಸಂತೋಷವಾಗಲಿದೆ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ಅಭಿವೃದ್ಧಿ ಸಾಧಿಸಬಲ್ಲಿರಿ. ತಾಳ್ಮೆಯು ಜೀವನದ ಮೂಲಮಂತ್ರವಾಗಿರಲಿ.
ಮಕರ
ಆಡಂಬರದ ಜೀವನ ಶೈಲಿಯವರಾದ ನೀವು ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವಿರಿ. ಬಟ್ಟೆ ಮಾರಾಟಗಾರರಿಗೆ ಲಾಭವಿರುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ.
ಕುಂಭ
ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಹೆಚ್ಚು ಏರಿಕೆ ಕಾಣಲಿರುವಿರಿ. ಕುಟುಂಬದಲ್ಲಿ ಸೋದರಿಗೆ ವಿವಾಹ ನಿಶ್ಚಯವಾಗುವುದು. ಸಿದ್ಧಿವಿನಾಯಕನ ಆರಾಧನೆಯಿಂದ ಶುಭ
ಮೀನ
ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ನಿಮ್ಮ ಕ್ರಿಯೆಯನ್ನು ಸಮರ್ಥಿಸಿ ಕೊಳ್ಳಲು ಸಾಕಷ್ಟು ಕಾರಣ ಸಿಗಲಿವೆ. ಬೇರೆಯವರ ಬಗ್ಗೆ ಅನುಕಂಪ ತೋರುವ ನೀವು ನಿಮ್ಮ ಬಗ್ಗೆಯೂ ಗಮನ ಹರಿಸುವುದನ್ನು ಮರೆಯದಿರಿ.