ADVERTISEMENT

ದಿನ ಭವಿಷ್ಯ: ಮನೆಯ ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಾಣುವಂತಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜೂನ್ 2025, 0:30 IST
Last Updated 23 ಜೂನ್ 2025, 0:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಯಾವುದೇ ಪ್ರಯತ್ನವನ್ನು ನಿಲ್ಲಿಸದೆ ಜಾಗರೂಕತೆಯಿಂದ ಕೆಲಸವನ್ನು ಮುನ್ನಡೆಸಿರಿ. ಆರ್ಥಿಕ ಸುಧಾರಣೆಯಿಂದ ಕುಟುಂಬದ ಎಲ್ಲ ತೊಂದರೆಗಳು ನಿವಾರಣೆಯಾಗಲಿವೆ. ಮನರಂಜನೆಗಾಗಿ ಖರ್ಚು ಮಾಡುವಿರಿ.
  • ವೃಷಭ
  • ಹಂತ ಹಂತದಲ್ಲೂ ಜುಗ್ಗನೆಂದು ಹೀಯಾಳಿಸಿಕೊಂಡು ಕೂಡಿಟ್ಟ ಹಣ ದೊಡ್ಡ ಮೊತ್ತವಾಗಿ ಉಪಯೋಗಕ್ಕೆ ಬರಲಿದೆ. ಕುಟುಂಬದ ಆಂತರಿಕ ವಿಷಯದಲ್ಲಿ ಉಂಟಾದ ತಪ್ಪುಗ್ರಹಿಕೆಯಿಂದ ಮನಸ್ತಾಪಗಳು ಬರಬಹುದು.
  • ಮಿಥುನ
  • ಮಾಡುವ ಕೆಲಸಗಳಲ್ಲಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವಿರಿ. ಪುಸ್ತಕದ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ. ಇಂದಿನ ವಿಚಾರಕ್ಕೆ ತೀರ್ಮಾನಿಸದೇ, ಭವಿಷ್ಯದ ಬಗ್ಗೆ ಯೋಚಿಸಿ ತೀರ್ಮಾನಿಸಿ.
  • ಕರ್ಕಾಟಕ
  • ಮಾನಸಿಕ ಸ್ಥೈರ್ಯ ಸದೃಢವಾಗುವುದು. ಹಲವಾರು ಕಾರಣಗಳಿಗೆ ಸ್ನೇಹಿತರ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸಬಹುದು. ಮೇಲಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ.
  • ಸಿಂಹ
  • ಗಳಿಕೆಯ ಬಗ್ಗೆ ಚಿಂತಿಸಬೇಡಿ, ಕೆಲಸದಲ್ಲಿ ಅಸ್ತಿತ್ವವನ್ನು ಕಾಪಾಡಿಕೊಳ್ಳಿ. ಉತ್ಸಾಹವನ್ನು ಹೆಚ್ಚಿಸಿಕೊಳ್ಳುವ ಸಮಯವಾಗಿದೆ. ಮತ್ತೊಬ್ಬರನ್ನು ಗೌರವಿಸುವುದರಿಂದ ನಿಮ್ಮ ಗೌರವವು ಹೆಚ್ಚುವುದು.
  • ಕನ್ಯಾ
  • ದಾಯಾದಿಗಳು ಅಥವಾ ಅಕ್ಕ-ಪಕ್ಕದವರು ಭೂ ಸಂಬಂಧದ ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬರುವರು. ಅದರಂತೆ ನಡೆಯುವುದೇ ಉತ್ತಮ.ಅನವಶ್ಯಕ ಚಿಂತೆ ಕಂಡುಬರಲಿದೆ.
  • ತುಲಾ
  • ಈ ದಿನ ಸರ್ಕಾರಿ ಮೂರನೇ ದರ್ಜೆಯ ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗುವುದು. ಬಂಡವಾಳ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಮನೆಯ ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಾಣುವಂತಾಗಲಿದೆ.
  • ವೃಶ್ಚಿಕ
  • ಅಧಿಕ ಜವಾಬ್ದಾರಿ ಅಥವಾ ಒತ್ತಡ ತರುವಂಥ ಕೆಲಸಗಳಿಂದ ದೂರವಿರಿ. ಕ್ರೀಡಾಪಟುಗಳಿಗೆ ಮತ್ತು ಕಲಾವಿದರಿಗೆ ಸಾಧನೆಗೆ ತಕ್ಕಂತೆ ಸರ್ಕಾರದಿಂದ ಸನ್ಮಾನಗಳು ಲಭಿಸಬಹುದು.
  • ಧನು
  • ಮಾತುಗಾರಿಕೆಯ ಸಾಮರ್ಥ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಅದನ್ನು ಬಳಸಿಕೊಳ್ಳಿ. ಬಂಧುಗಳು ಹಾಗೂ ಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಿದ್ದೀರಿ.
  • ಮಕರ
  • ರಾಜಕಾರಣಿಗಳಿಗೆ ಬಹು ದಿನಗಳ ನಿರೀಕ್ಷೆಯಂತೆ ಉತ್ತಮ ಸ್ಥಾನಮಾನ ಲಭ್ಯವಾಗಲಿದೆ. ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಕೆಲವು ವಿಷಯದಲ್ಲಿ ಕಠಿಣ ನಿಲುವಿನ ಅಗತ್ಯವಿದೆ.
  • ಕುಂಭ
  • ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತವಾಗಿ ಅನುಭವಕ್ಕೆ ಬರುವುದು. ಬೆನ್ನುನೋವು ಹೋಗಲಾಡಿಸಿಕೊಳ್ಳಲು ಯೋಗಾಭ್ಯಾಸ ಮಾಡಿರಿ. ದೇವತಾ ಅನುಗ್ರಹ ಉತ್ತಮವಿದೆ.
  • ಮೀನ
  • ರಬ್ಬರ್, ಪ್ಲಾಸ್ಟಿಕ್ ವ್ಯವಹಾರದವರು ವ್ಯಾಪಾರದಲ್ಲಿ ಅಧಿಕ ಲಾಭ ಹೊಂದುವರು. ತೆಗೆದುಕೊಂಡಿರುವ ನಿರ್ಧಾರಗಳು ಭವಿಷ್ಯದ ಮೇಲೆ ಉತ್ತಮ ಪರಿಣಾಮ ಬೀರಲಿವೆ. ನಿರ್ಧಾರದಲ್ಲಿ ಸ್ಪಷ್ಟತೆ ಇರಲಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.