ADVERTISEMENT

ದಿನ ಭವಿಷ್ಯ: ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ

ಶನಿವಾರ, 20 ಸೆಪ್ಟೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಸೆಪ್ಟೆಂಬರ್ 2025, 22:30 IST
Last Updated 19 ಸೆಪ್ಟೆಂಬರ್ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ರಾಜಕೀಯ ವ್ಯಕ್ತಿಗಳು ಪಕ್ಷದ ಸದಸ್ಯರಿಂದ ತೀವ್ರತರ ಮಾತು ಕೇಳಬೇಕಾಗುವುದು ಅನಿವಾರ್ಯ. ವ್ಯಾಪಾರದಲ್ಲಿ ತೃಪ್ತಿಕರ ವಾತಾವರಣ. ವೈಮಾನಿಕ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಮತ್ತು ಪುರಸ್ಕಾರಗಳು ಪ್ರಾಪ್ತಿ.
  • ವೃಷಭ
  • ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಅಲಂಕಾರ ಮಾಡಿಸುವ ಬದಲಾಗಿ ಅನಿವಾರ್ಯವಾಗಿ ಬೇಕಾದ ವಿಚಾರವನ್ನು ಅಳವಡಿಸುವ ಬಗ್ಗೆ ಗಮನವಹಿಸಿ. ಇಂದಿನ ನಿಮ್ಮ ಫಲಿತಾಂಶ ನಿಮ್ಮ ಮನಸ್ಸಿಗೆ ಸರಿಯಾಗಿರುತ್ತದೆ.
  • ಮಿಥುನ
  • ಅಡಿಗೆ ತಯಾರಕರಿಗೆ ಶುಭದಿನ. ನಿಮ್ಮ ರುಚಿಯಾದ ಅಡುಗೆಗೆ ಹೊಸ ಅಭಿಮಾನಿಗಳ ಸಂಪಾದನೆ ಆಗುತ್ತದೆ. ಲಂಚದ ಬಲೆಗೆ ಬೀಳದಿರಿ. ಮಾಸಿಕ ವೇತನ ಪಡೆಯುವ ಹೊಸದಾರಿ ಕಣ್ಣಿಗೆ ಬೀಳುವುದು.
  • ಕರ್ಕಾಟಕ
  • ಅಚ್ಚರಿಯ ಸಂಗತಿಯನ್ನು ಎದುರಿಸುವ ಸಾಮರ್ಥ್ಯ ಕೊಡಲು ದೇವರಲ್ಲಿ ಪ್ರಾರ್ಥಿಸಿ. ಸಣ್ಣ ಮಕ್ಕಳ ಶಿಕ್ಷಕರು ಮಕ್ಕಳ ಸಂತೋಷದಿಂದ ಖುಷಿ ಹೊಂದುವಿರಿ. ಬಿಸಿ ವಸ್ತು ಹಾಗು ವಿದ್ಯುತ್ ಸಂಬಂಧಿ ವಿಷಯಗಳಲ್ಲಿ ಎಚ್ಚರ.
  • ಸಿಂಹ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಲು ಆಹ್ವಾನ ಸಿಗುವುದು. ಕುಟುಂಬ ಮತ್ತು ಮಕ್ಕಳ ಬಗ್ಗೆ ಗಮನ ಹರಿಸುವುದು ಅಗತ್ಯ. ಸಕಾಲದಲ್ಲಿ ಆರಂಭಿಸಿದ್ದ ವ್ಯವಹಾರಗಳು, ಕೆಲಸ ಕಾರ್ಯ ಸಫಲತೆ ತರಲಿವೆ.
  • ಕನ್ಯಾ
  • ಮುಖ್ಯವಾಗಿ ಮಾತುಗಾರರು ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡಲ್ಲಿ ಉತ್ತಮ ಅಭಿವೃದ್ಧಿ ಹೊಂದುವಿರಿ. ಇಷ್ಟದೇವರ ದರ್ಶನದಿಂದ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ, ಮನಸ್ಸಿಗೆ ಶಾಂತಿ ದೊರೆಯಲಿದೆ.
  • ತುಲಾ
  • ಪಂಡಿತರ ಸಮಾಗಮದಿಂದ ಜ್ಞಾನವೃದ್ಧಿಯಾಗುವುದು. ನೂತನ ಕಾರ್ಯದಲ್ಲಿ ನಿರಾಸಕ್ತಿ ಇದ್ದರೂ, ದೈನಂದಿನ ಕೆಲಸಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಪರೀಕ್ಷಿಸಬಹುದು.
  • ವೃಶ್ಚಿಕ
  • ಕ್ಯಾಟರಿಂಗ್ ಉದ್ಯಮದಾರಿಗೆ ಹೊಸ ಹೊಸ ಪರಿಚಯ, ಹೊಸ ಹೊಸ ಅವಕಾಶ ಅಭಿವೃದ್ಧಿಗೆ ಕಾರಣವಾಗುತ್ತದೆ. ಬಟ್ಟೆ ವ್ಯಾಪಾರಿಗಳು ಬಂಡವಾಳ ಹೂಡಿಕೆಯಲ್ಲಿ ಎಡಗುವಂತಾಗಲಿದೆ. ರೈತರಿಗೆ ಸಾಲ ತೀರಿಸುವ ಕಾಲ.
  • ಧನು
  • ಬಹಳ ದಿನಗಳಿಂದ ಯೋಚಿಸಿದ್ದ ವಾಹನ ಖರೀದಿ ವಿಚಾರಕ್ಕೆ ತೀರ್ಮಾನ ಸಿಗುತ್ತದೆ. ಡೈರಿ ಪದಾರ್ಥ ವ್ಯಾಪಾರಸ್ಥರಿಗೆ ಆಗುವ ಹೆಚ್ಚಿನ ಉತ್ಪಾದನೆಯಿಂದ ಲಾಭ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ.
  • ಮಕರ
  • ಕಾರ್ಯರಂಗದಲ್ಲಿ ಹೆಚ್ಚಿನ ಸ್ಪರ್ಧೆ, ಪೈಪೋಟಿಗಳಿರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳಿರಿ. ಕೇವಲ ಹಟಮಾರಿತನದಿಂದ ಹಿಡಿದ ಕೆಲಸ ಬಿಡುವುದಿಲ್ಲ ಎಂದು ತೀರ್ಮಾನಿಸಿದರೆ ಸಮಯ, ಹಣ ವ್ಯರ್ಥ.
  • ಕುಂಭ
  • ರೈತರಿಗೆ ಬೆಳೆದ ತರಕಾರಿ ಬೆಳೆಗೆ ಒಳ್ಳೆಯ ಮಾರುಕಟ್ಟೆ ಸಿಕ್ಕಿ ಸಂತೋಷ ಉಂಟಾಗುತ್ತದೆ. ನಿರೋದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದಂಥ ಕೆಲಸ ಸಿಗುವ ಸಾಧ್ಯತೆ ಇದೆ. ನಿಮ್ಮ ಕರ್ತವ್ಯಕ್ಕೆ ಇನ್ನೂ ಹೆಚ್ಚಿನ ಜವಾಬ್ದಾರಿ ಬೇಕಾಗುವುದು.
  • ಮೀನ
  • ರಾಜಕಾರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆಯಾಗುವ ಸಂಭವ. ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚ ಆದಾಯದ ಮಿತಿಯೊಳಗಿರುವುದು. ರಾಸಾಯನಿಕ ಕ್ಷೇತ್ರಗಳಿಗೆ ಸಂಬಂಧಿಸಿದವರಿಗೆ ಹರ್ಷದಾಯಕವಾಗಿರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.