ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಶುಭ ಸಂದೇಶವೊಂದು ಕೇಳಿಬರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಆಗಸ್ಟ್ 2025, 0:07 IST
Last Updated 3 ಆಗಸ್ಟ್ 2025, 0:07 IST
   
ಮೇಷ
  • ಹೆಚ್ಚಿನ ಹೂಡಿಕೆಯ ಬಗ್ಗೆ ತಿಳಿದವರೊಂದಿಗೆ ಮಾತುಕತೆ ನಡೆಸಿ ತೀರ್ಮಾನಿಸಿ. ಔದಾರ್ಯದಿಂದ ಕಾರ್ಯನಿರ್ವಹಿಸಿದಲ್ಲಿ ಹೆಚ್ಚಿನ ಏಳಿಗೆಯನ್ನು ಕಾಣುವಿರಿ. ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  • ವೃಷಭ
  • ಐಶ್ವರ್ಯವು ಅನಿರೀಕ್ಷಿತವಾಗಿ ಬಂದಾಗ ದುಂದುವೆಚ್ಚ ಮಾಡದೆ ಬುದ್ಧಿವಂತಿಕೆಯಿಂದ ಸದುಪಯೋಗ ಪಡಿಸಿಕೊಳ್ಳಿ. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವ ಸನ್ನಿವೇಶಗಳು ಈ ದಿನ ನಿಮಗೆ ಎದುರಾಗಲಿದೆ.
  • ಮಿಥುನ
  • ಅಧಿಕಾರಿಗಳಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗಲಿದ್ದು, ಆತ್ಮವಿಶ್ವಾಸ ಬೆಳೆಯುವುದು. ಬಳೆ ಮತ್ತು ಫ್ಯಾನ್ಸಿ ವಸ್ತುಗಳ ಮಾರಾಟಗಾರರಿಗೆ ಉತ್ತಮ ಲಾಭ. ಮಕ್ಕಳಿಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ಹೆಚ್ಚುವುದು.
  • ಕರ್ಕಾಟಕ
  • ಹಿರಿಯರ ಬಳಿಯಲ್ಲಿ ಅನಾವಶ್ಯಕವಾದ ವಿವಾದ, ಗೊಂದಲಗಳಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಶಿಕ್ಷಣಕ್ಕೆಂದು ವಿದೇಶಕ್ಕೆ ತೆರಳಿದ ಮಗನ ಆಗಮನವಾಗುವುದು. ನಿಮ್ಮ ಸ್ಪರ್ಧಾಮನೋಭಾವಗಳು ತೀವ್ರಗೊಳ್ಳುವುದು.
  • ಸಿಂಹ
  • ಹೊಸ ಯೋಜನೆಗಳ ಜಂಟಿ ಕಾರ್ಯಾಚರಣೆಯ ವಿಷಯವಾಗಿ ಸ್ನೇಹಿತರೊಡನೆ ಮಾತುಕತೆ ನಡೆಯಲಿದೆ. ರಂಗಕರ್ಮಿಗಳಿಗೆ ಮತ್ತು ಟಿ.ವಿ ಕಲಾವಿದರಿಗೆ ಒಳ್ಳೆಯ ದಿನ. ಅನಿರೀಕ್ಷಿತವಾಗಿ ಶುಭ ಸಂದೇಶವೊಂದು ಕೇಳಿಬರಲಿದೆ.
  • ಕನ್ಯಾ
  • ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ. ಆರ್ಥಿಕ ಬಲವನ್ನು ಮತ್ತು ನೆಮ್ಮದಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಹೊಂದಿರುವ ನಿಮಗೆ ಗಣಪತಿಯ ಆರಾಧನೆ ಶುಭವನ್ನುಂಟುಮಾಡುವುದು.
  • ತುಲಾ
  • ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಅಪಾರವೆಂದು ಅನಿಸಲಿದೆ. ಪರೋಪಕಾರ ಮಾಡಲು ಹೋಗಿ ಯಾವುದೋ ಅಪವಾದಕ್ಕೆ ಒಳಗಾಗುವಂತೆ ಆಗಲಿದೆ. ಕೆಲವು ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಬಯಸುವಿರಿ.
  • ವೃಶ್ಚಿಕ
  • ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಹತ್ತಾರು ರೀತಿಯಲ್ಲಿ ಯೋಚನೆ ಮಾಡುವುದಕ್ಕಿಂತ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಉತ್ತಮ.
  • ಧನು
  • ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ. ಮುರಿದುಬಿದ್ದಿದ್ದ ಸಂಬಂಧ ಮತ್ತೆ ಚಿಗುರೊಡೆಯುತ್ತದೆ. ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು.
  • ಮಕರ
  • ಇಂದು ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಮನಸ್ಸಿಗೆ ಬೇಸರವಿರುವುದು. ವಿದ್ವಾಂಸರೊಡನೆ ಕೆಲ ಹೊತ್ತು ಕಳೆಯುವ ಸಂಭವವಿದೆ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಸಮಯ ಕಳೆಯುರಿ.
  • ಕುಂಭ
  • ಶ್ರೀಮಂತಿಕೆಯ ಬದುಕಿಗೆ ಮನಸ್ಸು ಹಾತೊರೆಯುವುದು. ಮಕ್ಕಳಿಂದ ದುಬಾರಿ ವಸ್ತುಗಳ ಖರೀದಿಯಾಗಬಹುದು. ಸಮಸ್ಯೆಗಳು ಹೆಚ್ಚುವುದಕ್ಕೆ ಮುಂಚಿತವಾಗಿಯೇ ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ಮಹಾಲಕ್ಷ್ಮಿ ಆರಾಧಿಸಿ.
  • ಮೀನ
  • ತಾಯಿಯ ಮಾತನ್ನು ಕೇಳಿದ್ದರೆ ಆಗುತ್ತಿತ್ತು ಎಂದು ಮುಂದೊಂದು ದಿನ ಸ್ಮರಿಸುವ ಬದಲು ಇಂದೇ ಕೇಳಿ. ದುರಾಸೆಯ ಸ್ವಭಾವದಿಂದ ಹೊರಬನ್ನ. ಮಕ್ಕಳ ಮೊದಲ ತೊದಲ ನುಡಿಗಳು ನಿಮ್ಮ ಸಂತೋಷಕ್ಕೆ ಕಾರಣವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.