ADVERTISEMENT

ದಿನ ಭವಿಷ್ಯ: ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು

ಭಾನುವಾರ, 21 ಸೆಪ್ಟೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಸೆಪ್ಟೆಂಬರ್ 2025, 20:29 IST
Last Updated 20 ಸೆಪ್ಟೆಂಬರ್ 2025, 20:29 IST
   
ಮೇಷ
  • ಜೀವನದಲ್ಲಿ ನಿಮ್ಮದೇ ಆದ ಉತ್ತಮ ನಿಯಮ ರೂಡಿಸಿಕೊಳ್ಳಿ. ತಪ್ಪು ಪುನರಾವರ್ತನೆ ಆಗದಂತೆ ಎಚ್ಚರ. ಕಾಲು ನೋವಿನ ಸಮಸ್ಯೆ ಕಾಡಬಹುದು . ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ.
  • ವೃಷಭ
  • ವರಮಾನದಲ್ಲಿ ಈ ದಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಹೊಸ ಮನೆ ನಿರ್ಮಾಣಕ್ಕಾಗಿ ಹೆಚ್ಚಿನ ತಯಾರಿ ನಡೆಸಬಹುದು, ವಾಸ್ತು ವಿಚಾರ ದಲ್ಲಿ ಗಮನಹರಿಸಿ. ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು.
  • ಮಿಥುನ
  • ಮನೆಯ ಎಲ್ಲ ವಿಷಯಗಳನ್ನು ಮನೆಯ ಸರ್ವ ಸದಸ್ಯರ ಎದುರು ಚರ್ಚಿಸಬೇಕೆಂಬ ಮನಸ್ಸಾಗುವುದು ಅದರಂತಯೇ ಚರ್ಚಿಸಲು ಸಿದ್ಧರಾಗು ವಿರಿ. ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ.
  • ಕರ್ಕಾಟಕ
  • ಸತತ ಪ್ರಯತ್ನದಿಂದ ಯಶಸ್ಸು ಹೊಂದಿ ಅಗೌರವಿಸಿದ ಸಂಬಂಧಿಕರ ಎದುರು ತಲೆ ಎತ್ತಿ ನಿಲ್ಲುವಂತಾಗುತ್ತದೆ. ಸುಖ ದುಃಖವನ್ನು ಸಮವಾಗಿ ಸ್ವೀಕರಿಸಿ ಜೀವನದಲ್ಲಿ ಹೊಸ ಚೈತನ್ಯ ತುಂಬಿ, ಆಸಕ್ತಿ ಹೆಚ್ಚಿಸಿಕೊಳ್ಳಿ.
  • ಸಿಂಹ
  • ದೇವರ ಅನುಗ್ರಹದಿಂದ ಬಹಳ ಹಳೆಯದಾದ ಹಾಗೂ ಕೌಟುಂಬಿಕವಾದ ಮುಖ್ಯ ಕೆಲಸವೊಂದನ್ನು ಪೂರ್ಣಗೊಳಿಸುವಿರಿ. ಪಿತ್ತ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು.
  • ಕನ್ಯಾ
  • ಅವಶ್ಯಕವಾಗಿ ಬೇಕಾಗಿರುವ ಮತ್ತು ನಿಮ್ಮ ನೆಚ್ಚಿನ ಉದ್ಯೋಗ ದೊರಕಿಸಿಕೊಳ್ಳಲು ತೀವ್ರ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ಬಹಳ ದಿನಗಳ ಬಳಿಕ ಬಂಧು-ಮಿತ್ರರ ಜೊತೆಗಿನ ಒಡನಾಟ ಸಂತೋಷ ತರಲಿದೆ.
  • ತುಲಾ
  • ಯೋಜನಾಬದ್ಧ ಕೆಲಸ ರೂಪಿಸದಿದ್ದರೆ ಈ ದಿನದ ನಿಮ್ಮ ಶ್ರಮ ವ್ಯರ್ಥ ಆಗಲಿದೆ. ಪ್ರಾಮಾಣಿಕವಾಗಿ ದೇವರು ಮೆಚ್ಚುವ ರೀತಿ ಕರ್ತವ್ಯ ನಿರ್ವಹಿಸು ವುದು ಉತ್ತಮ. ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆ ಕೊಡಲು ಕಲಿಯಿರಿ.
  • ವೃಶ್ಚಿಕ
  • ಶಿಕ್ಷಕ ವೃತ್ತಿಯನ್ನು ನಡೆಸಿ ವಿದ್ಯಾದಾನ ಮಾಡುವವರಿಗೆ ಸೂಕ್ತ ಗೌರವಾದರಗಳು ದೊರೆಯಲಿವೆ. ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟ ಇರಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಅಧಿಕವಾದ ಗಮನವಿರಲಿ.
  • ಧನು
  • ಕಟ್ಟಡ ನಿರ್ಮಾಣದ ಕೆಲಸಗಾರರಿಗೆ ವೃತ್ತಿಯಲ್ಲಿ ಬೇಸರ ಹುಟ್ಟಬಹುದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮದ ಅಗತ್ಯವಿದೆ. ದೂರ ಸಂಚಾರದಲ್ಲಿ ವೃಥಾ ಖರ್ಚುಗಳಿದ್ದರೂ ಸಂತೋಷ ಇರಲಿದೆ.
  • ಮಕರ
  • ಮದುವೆಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಬರಲಿದೆ. ನಿಧಾನಗತಿಯಲ್ಲಿ ಸಾಗುತ್ತಿರುವ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ವ್ಯಾಪಾರದಲ್ಲಿ ಮೋಸದ ಬಲೆಗೆ ಬೀಳದಿರಿ.
  • ಕುಂಭ
  • ನಾಳೆಯ ಯೋಜನೆಗಳಿಗೆ ಇಂದು ಹೆಚ್ಚು ಗಮನ ಕೊಡುವುದರಿಂದ ಕೆಲಸ ಪೂರ್ಣಗೊಳಿಸಲು ಸಹಾಯ ಮಾಡಲಿದೆ. ಒಂದು ಕುತೂಹಲಕಾರಿ ವಿಷಯ ತಿಳಿದು ಅಚ್ಚರಿಗೊಳ್ಳುವಿರಿ.
  • ಮೀನ
  • ರಾಜಕಾರಣಿಗಳ ಮಾತಿನ ಪ್ರಭಾವದಿಂದ ಅಥವಾ ಹಣಬಲದಿಂದ ನಿಮ್ಮ ಕೆಲಸ ನೆರವೇರುತ್ತದೆ. ಯೋಜನೆಯ ಮೇಲೆ ಹಿಡಿತ ಸಾಧಿಸಲು ಸ್ನೇಹಿತರ ಬೆಂಬಲ ಸಿಗಲಿದೆ. ಶ್ರೀ ಮಂಜುನಾಥನ ದರ್ಶನ ಪಡೆದುಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.