ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ದಿನಸಿ ವಸ್ತುಗಳ ಖರೀದಿಯನ್ನು ದೊಡ್ಡ ಮಟ್ಟದಲ್ಲಿ ಮಾಡುವಿರಿ. ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿ ಕೇಳುವಿರಿ. ಆಕಸ್ಮಿಕ ಪ್ರಯಾಣದ ಸಾಧ್ಯತೆಯಿದೆ.
ವೃಷಭ
ವೃತ್ತಿಯಲ್ಲಿದ್ದ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ತೃಪ್ತಿ, ಸಂತೋಷ ಉಂಟಾಗಲಿದೆ. ಮೊಬೈಲ್ ಬಳಕೆಯು ಯೋಚನೆಗಳಿಗೆ ಕಾರಣವಾಗುತ್ತದೆ. ಭಕ್ತಿಯಿಂದ ಈಶ್ವರನನ್ನು ಆರಾಧಿಸಿ.
ಮಿಥುನ
ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಸಂಗೀತ-ನಾಟ್ಯ ಸಾಧಕರಿಗೆ ವೇದಿಕೆ ದೊರೆತು ವಿದ್ವತ್ ಪ್ರದರ್ಶನವಾಗುವುದು.
ಕರ್ಕಾಟಕ
ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ನಂತರದಲ್ಲಿ ಷೇರುಗಳನ್ನು ಕೊಳ್ಳುವ ಯೋಜನೆಗೆ ಮುಂದಾಗಿ. ವರ್ತಮಾನ ಸ್ಥಿತಿ ಅರಿತು ವ್ಯವಹಾರ ಮಾಡಿ. ಇತರರನ್ನು ತಿರಸ್ಕಾರದಿಂದ ನೋಡದಿರಿ.
ಸಿಂಹ
ಬಹಳ ದಿನಗಳಿಂದ ನಿರೀಕ್ಷಿಸಿದ ರೀತಿಯಲ್ಲಿ ಉದ್ಯೋಗ ಸಿಕ್ಕದಿದ್ದರೂ, ಸಣ್ಣ ಮಟ್ಟಿನ ಉದ್ಯೋಗ ಸಿಕ್ಕಿರುವುದು ಸಂತೋಷ ಪಡುವ ವಿಚಾರ. ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುವಂತವರಿಗೆ ಉಷ್ಣದ ಸಮಸ್ಯೆ ಕಾಡಬಹುದು.
ಕನ್ಯಾ
ಸ್ನೇಹಿತನ ಸಹಾಯದಿಂದ ಹಲವಾರು ವಿಚಾರಗಳಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ರಕ್ಷಣೆಯನ್ನು ಬಯಸಿ ಬಂದ ಸ್ನೇಹಿತನಿಗೆ ಕೈಲಾದ ಸಹಾಯ ಮಾಡಿ. ಒಳ್ಳೆಯದಾಗುತ್ತದೆ.
ತುಲಾ
ರಾಜಕಾರಣಿಗಳಿಗೆ, ಸರ್ಕಾರಿ ನೌಕರರಿಗೆ ಸುಯೋಗವೆಂದು ಹೇಳ ಬಹುದು. ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಕಡಿಮೆ ಪ್ರಯತ್ನದಿಂದ ಅಧ್ಯಾಪಕ ವೃತ್ತಿ ದೊರೆಯುವ ಸಂಭವವಿದೆ. ಖಾಸಗಿ ನೌಕರರಿಗೆ ಕೆಲಸವಿರುವುದು.
ವೃಶ್ಚಿಕ
ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ನಿಮಗೆ ಪ್ರತಿ ಬಾರಿಯ ಶುಭಕಾರ್ಯಗಳು ತಪ್ಪಿ ಹೋಗುವುದು ದುಃಖ ತರುವುದು. ಸ್ನೇಹಿತನಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಬರುವುದು.
ಧನು
ಅನಗತ್ಯ ವಿಷಯಗಳಿಂದ ದೂರವಿರುವುದು ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಲು ಅನುಕೂಲ. ವೃತ್ತಿಯಲ್ಲಿ ನಿಷ್ಠರಾಗಿರಿ. ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕಂತಹ ಫಲ ದೊರೆಯುವುದು.
ಮಕರ
ಮಗಳ ಮದುವೆ ವಿಷಯವನ್ನು ಆಕೆಯ ಅನುಮತಿ ಪಡೆದು ಮಾತ್ರವೇ ಮನೆಯವರ ಜೊತೆ ಪ್ರಸ್ತಾಪಿಸಿ. ಕೋರ್ಟಿನ ಕೆಲಸಗಳನ್ನು ತ್ವರಿತಗತಿಯಲ್ಲಿ ನಡೆಸಿ ಕೊಡುವಂತೆ ವಕೀಲರಲ್ಲಿ ಕೇಳಿಕೊಳ್ಳುವಿರಿ
ಕುಂಭ
ವೈದ್ಯರಿಗೆ ವೃತ್ತಿಯಲ್ಲಿ ಆಶ್ಚರ್ಯಕರ ಘಟನೆ ನಡೆದು ದೇವರಿದ್ದಾನೆ ಎಂಬ ನಂಬಿಕೆ ಅನುಭವಕ್ಕೆ ಬರುವಂತಾಗುವುದು. ಸಹೋದ್ಯೋಗಿಗಳೊಡನೆ ಪ್ರೀತಿಯಿಂದ ವರ್ತಿಸುವುದರಿಂದ ಕೆಲಸ ಸರಾಗವಾಗಿ ಸಾಗಲಿದೆ.
ಮೀನ
ಯಾವ ಒತ್ತಡಗಳಿಗೂ, ಯಾರ ದಬ್ಬಾಳಿಕೆಗೂ ಒಳಗಾಗದೆ ಸ್ವತಂತ್ರವಾಗಿರಲು ಬಯಸುವಿರಾದರೂ ಸಾಧ್ಯವಾಗುವುದಿಲ್ಲ. ಮನಸ್ಸಿಗೆ ಅಸಮಾಧಾನ ಆಗುವಂತಹ ಹಲವು ಘಟನೆ ಬಾಳಲ್ಲಿ ನಡೆಯಲಿದೆ.