ADVERTISEMENT

ದಿನ ಭವಿಷ್ಯ: ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜೂನ್ 2025, 23:50 IST
Last Updated 23 ಜೂನ್ 2025, 23:50 IST
   
ಮೇಷ
  • ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಒತ್ತಡ ಉಂಟಾಗಲಿದೆ. ಖಾದಿ ಉದ್ಯಮದವರು ಬಂಡವಾಳದ ಮೇಲೆ ಗಮನವಿರಿಸಿ.
  • ವೃಷಭ
  • ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯ ಪ್ರಾಪ್ತಿ. ಮಕ್ಕಳಿಂದ ಸುಖ, ನೆಮ್ಮದಿ ದೊರೆಯಲಿದೆ. ವಿದೇಶದಲ್ಲಿ ವಾಸ ಮಾಡುವ ಸಂಬಂಧಿಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ.
  • ಮಿಥುನ
  • ವಿದ್ಯಾರ್ಥಿಗಳು ಉತ್ಸಾಹದಿಂದ ಮುಂದಿನ ಹೆಜ್ಜೆಗಳನ್ನಿರಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಮಾರಾಟ ಮತ್ತು ಲಾಭವಾಗುವುದು. ಸೋದರನ ಆಗಮನದಿಂದ ಮನೆಯಲ್ಲಿ ಸಂಭ್ರಮವಿರುವುದು.
  • ಕರ್ಕಾಟಕ
  • ಕೆಲಸ ಬದಲಿಸುವ ಯೋಚನೆ ಮಾಡುವವರಿಗೆ ಸಕಾಲ.ಗಳಿಕೆಯ ವಿಚಾರವಾಗಿ ಒದಗಿಬರುವ ಅವಕಾಶದ ಬಗ್ಗೆ ಚಿಂತಿಸುವಿರಿ. ಗುತ್ತಿಗೆ ಕೆಲಸದ ಬಾಕಿ ಹಣವು ಸಂದಾಯವಾಗುವುದು.
  • ಸಿಂಹ
  • ಅಗ್ನಿಯಲ್ಲಿ ಅಥವಾ ಶಸ್ತ್ರಗಳಿಂದ ಆಪತ್ತು ಎದುರಾಗುವ ಸಂಭವವಿರುವುದರಿಂದ ಅವುಗಳ ಉಪಯೋಗದಲ್ಲಿ ಜಾಗ್ರತರಾಗಿರಿ. ಭೂ ವ್ಯವಹಾರದಲ್ಲಿ ಹಿಂದಿನಿಂದ ನಡೆದ ಕೌಟುಂಬಿಕ ಕಲಹಕ್ಕೆ ಪೂರ್ಣವಿರಾಮ ಸಿಗಲಿದೆ.
  • ಕನ್ಯಾ
  • ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು ಬರಲಿದೆ. ಉದ್ಯಮಿ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರುವುದು.
  • ತುಲಾ
  • ಪಾಲುದಾರಿಕೆ ವ್ಯವಹಾರದಲ್ಲಿ ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ –ಸಂಬಂಧ ಮುಂದುವರಿಯಲಿದೆ. ಮನೆಯ ಪರಿಸ್ಥಿತಿಯು ಸುಧಾರಿಸುವುದು. ಹಣಕಾಸಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
  • ವೃಶ್ಚಿಕ
  • ಮಕ್ಕಳ ಆಲಸ್ಯತನ ಪೋಷಕರಲ್ಲಿ ದೊಡ್ಡ ಸಮಸ್ಯೆಯಾಗುವುದು. ವ್ಯಾವಹಾರಿಕ ವಿಷಯದಲ್ಲಿ ಚರ್ಚೆ ಮಾಡುವುದು ಲಾಭ ಉಂಟುಮಾಡುತ್ತದೆ. ಇನ್ನೊಬ್ಬರಿಗೆ ಸಾಲ ಕೊಡುವಾಗ ಸರಿಯಾಗಿ ಯೋಚಿಸಿ, ನಿರ್ಧರಿಸಿ.
  • ಧನು
  • ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತಗೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸಾಧನೆಗೆ ಪೂರಕವಾದ ದಿನವಾಗಿದೆ. ಧೈರ್ಯ –ಸಾಮರ್ಥ್ಯದಿಂದ ಸಹೋದ್ಯೋಗಿಗಳ ಮನ ಗೆಲ್ಲುವಿರಿ.
  • ಮಕರ
  • ಹಿಂದುರುಗಿ ಬರಬೇಕಾಗಿರುವ ಹಣ ಸಂಜೆಯ ವೇಳೆಗೆ ಕೈ ಸೇರುವುದು. ಕೆಲಸಗಳ ಬಗ್ಗೆ ಅನುಭವಸ್ಥರೊಂದಿಗೆ ಮಾತುಕತೆ ನಡೆಸು ವುದರಿಂದ ತಿಳಿವಳಿಕೆ ವೃದ್ಧಿ. ಮಗನಿಗಾಗಿ ವೈದ್ಯಕೀಯ ಖರ್ಚು ಹೆಚ್ಚುವುದು.
  • ಕುಂಭ
  • ವ್ಯವಹಾರದ ವಿಚಾರದಲ್ಲಿ ಇನ್ನೂ ಅನುಭವ ಬೇಕಾಗುವುದು. ವೃತ್ತಿಯನ್ನು ಸವಾಲೆಂಬಂತೆ ಸ್ವೀಕರಿಸುವ ಸನ್ನಿವೇಶಗಳು ಎದುರಾಗುತ್ತದೆ. ದಕ್ಷಿಣಾಮೂರ್ತಿಯ ಆರಾಧನೆ ಯಶಸ್ಸಿನ ದಾರಿ ತೋರಿಸಲಿದೆ.
  • ಮೀನ
  • ಮಿತ್ರನೊಬ್ಬನ ಭೇಟಿ ಮನಸ್ಸಿಗೆ ಮುದ ತರುವುದು. ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದು ಕೊಡುವುದು. ನಯವಾದ ಮಾತುಗಳಿಂದ ಮಕ್ಕಳನ್ನು ತಿದ್ದುವ ಪ್ರಯತ್ನ ಮಾಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.