ADVERTISEMENT

ದಿನ ಭವಿಷ್ಯ: ಈ ರಾಶಿಯವರು ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮಾನಸಿಕ ಉದ್ವೇಗ ಕಂಡುಬಂದೀತು. ಪ್ರತಿ ಕಾರ್ಯಕ್ಕೂ ಹಲವು ಬಾರಿ ಪ್ರಯತ್ನ ಪಡಬೇಕಾದೀತು. ದೈಹಿಕ ಮತ್ತು ಧಾರ್ಮಿಕ ಪ್ರಯತ್ನದಿಂದ ದುಷ್ಫಲವನ್ನು ಸುಧಾರಿಸಿಕೊಳ್ಳಬಹುದು. ಧಾರ್ಮಿಕ ಶ್ರದ್ಧೆ ಬೆಳೆಸಿಕೊಳ್ಳಿರಿ.
  • ವೃಷಭ
  • ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸುವುದು ಉತ್ತಮ. ಕುಟುಂಬದ ಜತೆಯಲ್ಲಿ ಸಂತೋಷವಾಗಿ ಕಳೆಯುವ ಹಾಗೆ ಆಗುವುದು. ರಾಜಕೀಯ ವಲಯದಲ್ಲಿನ ಬದಲಾವಣೆಯ ಲಾಭ ಪಡೆಯುವಿರಿ.
  • ಮಿಥುನ
  • ಆಫೀಸಿನ ಕೆಲಸಗಳಲ್ಲಿ ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇಬೇಕಾದ ಸಮಯ ಬರಲಿದೆ. ಮನೆಯವರ ಬೇಡಿಕೆಗಳನ್ನು ಸ್ವಲ್ಪಮಟ್ಟಿಗೆ ಪೂರೈಸುವಿರಿ. ಜಮೀನಿನ ಕೆಲಸಗಳತ್ತ ಮುತುವರ್ಜಿ ವಹಿಸಿ.
  • ಕರ್ಕಾಟಕ
  • ಅಪೇಕ್ಷೆಯ ಜತೆಯಲ್ಲಿ ಮತ್ತು ಸಹೋದರನ ಸಹಾಯದ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗಲಿವೆ. ಅಧಿಕ ಬಂಡವಾಳವನ್ನು ಹಾಕುವುದರಿಂದ ಕೈ ಸುಡುವಂತಾಗುವುದು.
  • ಸಿಂಹ
  • ಮಸಾಲೆ ಪದಾರ್ಥ ಅಥವಾ ಖಾದ್ಯಗಳ ಮಾರಾಟಗಾರರಿಗೆ ಅಧಿಕ ಮಟ್ಟದಲ್ಲಿ ಬೇಡಿಕೆಗಳು ಉಂಟಾಗಲಿವೆ. ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು. ತಂದೆ-ತಾಯಿ ಆರೋಗ್ಯ ಸ್ಥಿತಿ ಉತ್ತಮ.
  • ಕನ್ಯಾ
  • ಮಹತ್ವದ ವಿಷಯಗಳನ್ನು ಗಂಭೀರವಾಗಿ ಚಿಂತಿಸಿ ನಿರ್ಧರಿಸುವುದು ಉತ್ತಮ. ವೈದ್ಯರು ಅದರಲ್ಲೂ ನರರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿತನದಿಂದ ಪಾಪ ಸಂಗ್ರಹವಾಗುವುದು.
  • ತುಲಾ
  • ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ವ್ಯವಹಾರಗಳ ಬಗ್ಗೆ ಗಮನ ಹರಿಸಿ. ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ.
  • ವೃಶ್ಚಿಕ
  • ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಒಂದು ಅವಕಾಶ ಸಿಗುವುದು. ಆರಿಸಿಕೊಂಡ ಮಾರ್ಗದಲ್ಲಿ ಸರಿ– ತಪ್ಪುಗಳ ಬಗ್ಗೆ ಯೋಚಿಸಿ ಏಕಾಗ್ರತೆಯಿಂದ ಮುನ್ನಡೆಯಿರಿ.
  • ಧನು
  • ಕೌಟುಂಬಿಕ ಅಭಿವೃದ್ಧಿಯಂಥ ವಿಷಯಗಳಿಂದ ಬಹಳ ಖುಷಿ ಸಿಗುವುದು. ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಪಡೆಯುವಿರಿ. ಆತ್ಮಾಭಿಮಾನವನ್ನು ಸಂರಕ್ಷಿಸಿಕೊಳ್ಳಿ. ಸ್ಫೂರ್ತಿಯಿಂದ ಕಾರ್ಯ ನಿರ್ವಹಿಸಿ.
  • ಮಕರ
  • ಧನಾಗಮನಕ್ಕೆ ಹಲವು ದಾರಿಗಳು ಕಂಡರೂ, ಸರಿಯಾದ ದಾರಿ ಆರಿಸಿಕೊಳ್ಳಿ. ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲವಾಗುತ್ತದೆ. ವಿಷ್ಣು ಸಹಸ್ರನಾಮ ಪಠಣದಿಂದ ಶುಭವಾಗುವುದು.
  • ಕುಂಭ
  • ಯಂತ್ರೋಪಕರಣಗಳ ಮಾರಾಟದಿಂದ ಲಾಭ ಇರಲಿದೆ. ಮನೆ ಕಟ್ಟಲು ಅಥವಾ ಮನೆಯನ್ನು ನವೀಕರಿಸಲು ಸುಸಮಯ. ಬೇಕಾದ ಹಣದ ವ್ಯವಸ್ಥೆ ನಿರಾಯಾಸವಾಗಿ ಆಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುವುದು.
  • ಮೀನ
  • ನಿತ್ಯದ ವೃತ್ತಿಗಳಲ್ಲಿ ಬದಲಾವಣೆ ಇರುವುದಿಲ್ಲ. ಪ್ರತಿ ವರ್ಷ ಕರ್ತವ್ಯದಂತೆ ಮಾಡಿಕೊಂಡುಬಂದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.