ನೀತಿ ನಿಯಮಗಳಿಗೆ ಬದ್ಧರಾದರೆ, ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಬರದು. ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬಾರದು ಎಂಬುವುದು ಅರಿವಾಗಲಿದೆ. ದುರ್ಗಾದೇವಿಯಿಂದ ಶುಭ ಪ್ರಾಪ್ತಿ.
ವೃಷಭ
ದಾರಿಹೋಕನಿಗಾಗಿ ಅಥವಾ ಬಾಲ್ಯಸ್ನೇಹಿತನಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಒದಗಿ ಬರುವುದು. ಸಜ್ಜನರ ಸಹವಾಸ ಮಾಡುವುದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ.
ಮಿಥುನ
ಹಿಂದಿನಿಂದ ಬಾಕಿ ಇದ್ದ ಕಚೇರಿ ಕೆಲಸಗಳನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡಿ. ರಾಜಕಾರಣಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಸುಯೋಗ. ತೀರ್ಥಕ್ಷೇತ್ರ ದರ್ಶನ ಮಾಡುವ ಬಗ್ಗೆ ತೀರ್ಮಾನಿಸಿ.
ಕರ್ಕಾಟಕ
ಗೆಳೆಯನ ಮನೆಯ ಸಮಾರಂಭಗಳಲ್ಲಿ ಭಾಗವಹಿಸುವ ಯೋಗವಿದೆ. ಹೆಚ್ಚಿನ ಜವಬ್ದಾರಿಯ ಕೆಲಸವನ್ನು ನಿಭಾಯಿಸುವುದರಿಂದ ತಲೆ ನೋವು. ಗೃಹ ಉಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ.
ಸಿಂಹ
ಮಕ್ಕಳ ಎಲ್ಲಾ ಮಾತುಗಳಿಗೆ ಸಮ್ಮತಿ ಸೂಚಿಸುವುದು ಸೂಕ್ತವಲ್ಲ. ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ನಡೆಯುವುದು ತಪ್ಪು ಎಂಬ ತಿಳುವಳಿಕೆ ಬರುವುದು. ವರುಣ ದೇವನು ನಿಮ್ಮ ಇಚ್ಚೆಯನ್ನು ಪೂರೈಸುವನು.
ಕನ್ಯಾ
ಯಾತ್ರಿಕರಿಗೆ ದೇವತಾನುಗ್ರಹದಿಂದಾಗಿ ಸಮಯೋಚಿತ ಸಹಾಯಾಹಸ್ತ ದೊರೆಯಲಿದೆ. ಬಟ್ಟೆ ವ್ಯಾಪಾರಸ್ಥರಿಗೆ ಒಳ್ಳೆಯ ದಿನವಾಗಿ ತೋರುವುದಿಲ್ಲ. ನಿಧಾನವಾಗಿ ಆರ್ಥಿಕ ಸುಧಾರಣೆಯನ್ನು ಕಾಣುವಿರಿ.
ತುಲಾ
ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆಯು ವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಮುಂದೂಡುವುದು ಉತ್ತಮ.
ವೃಶ್ಚಿಕ
ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು. ಸಾಮಾಜಿಕ ಜೀವನ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಮಧ್ಯಮವರ್ಗದವರು ಹೆಚ್ಚಿನ ಕೌಟುಂಬಿಕ ಸಂತಸವನ್ನು ಅನುಭವಿಸುವಿರಿ.
ಧನು
ವೃತ್ತಿ ಬದುಕಿನಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ವಿರೋಧ ಬರಲಿದೆ. ಆದ್ದರಿಂದ ವಿಶ್ವಾಸದಲ್ಲಿ ಯಾವುದೇ ರೀತಿಯ ಸಲಹೆ ಸೂಚನೆಯನ್ನು ನೀಡಬೇಡಿ. ಆಹಾರ ಪದಾರ್ಥದಲ್ಲಿ ಇಷ್ಟಪಟ್ಟಿದ್ದು ಕೈ ಸೇರುವುದು.
ಮಕರ
ಈ ದಿನದ ನಿಮ್ಮ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯುವುದು ಅಸಾಧ್ಯ, ಆದ್ದರಿಂದ ಕೆಲಸ-ಕಾರ್ಯಗಳನ್ನು ಮುಂಚಿತವಾಗಿ ಆರಂಭಿಸಿ. ಗೃಹ ಚಟುವಟಿಕೆಯಲ್ಲಿ ಸಹೋದರರಿಂದ ಸಹಾಯವನ್ನು ಪಡೆಯುವಿರಿ.
ಕುಂಭ
ವಿದ್ಯಾರ್ಥಿಗಳು ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಮುಂದುವರೆಯಲು ಸರಳವಾಗಿ ಬಹಳಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಸ್ವ ಪ್ರಯತ್ನದಿಂದ ಆಸ್ತಿ ಸಂಪಾದನೆ ಮಾಡುವಿರಿ. ನೀಲಿ ಬಣ್ಣ ಶುಭವನ್ನು ತರುವುದು.
ಮೀನ
ಧಾರ್ಮಿಕತೆಗೆ ಸಮಯವನ್ನು ಮೀಸಲಿಡಿ. ಮನೆಯ ರಕ್ಷಣಾ ವ್ಯವಸ್ಥೆ ಯಲ್ಲಿ ನಿಮ್ಮಿಂದ ಯಾವುದೇ ರೀತಿಯ ತಪ್ಪುಗಳು ಸಂಭವಿಸದಂತೆ ಜಾಗ್ರತೆ ವಹಿಸಿ. ಸಿಹಿತಿನಿಸುಗಳ ತಯಾರಕರಿಗೆ ಬೇಡಿಕೆ ಹೆಚ್ಚಾಗುವುದು.