ADVERTISEMENT

ದಿನ ಭವಿಷ್ಯ: ಆಗಸ್ಟ್ 21 ಗುರುವಾರ 2025– ಅನಾವಶ್ಯಕ ವಿವಾದ ಏಳಿಗೆ ತಡೆಯುತ್ತದೆ

ದಿನ ಭವಿಷ್ಯ: ಆಗಸ್ಟ್ 21 ಗುರುವಾರ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಆಗಸ್ಟ್ 2025, 18:31 IST
Last Updated 20 ಆಗಸ್ಟ್ 2025, 18:31 IST
   
ಮೇಷ
  • ನಿಮ್ಮ ಕೆಲಸಗಳೆಲ್ಲ ಬಿರುಸಿನಿಂದ ಸಾಗಲಿದೆ ಮತ್ತು ಮುಕ್ತಾಯದ ಹಂತ ತಲುಪುವುದು. ನಿಮ್ಮ ಜೀವನದಲ್ಲಿ ಹೊಸದೊಂದು ಅಧ್ಯಾಯ ಆರಂಭ ಮಾಡುವ ಬಗ್ಗೆ ಗಮನಹರಿಸಿ. ಆಲಸ್ಯ ದೂರಮಾಡಿ, ಶುಭವಾಗುತ್ತದೆ.
  • ವೃಷಭ
  • ತಾಯಿಯವರ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ಮಗನಿಗೆ ಹೆಚ್ಚಿನ ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಕುಟುಂಬಕ್ಕೆ ಸಂತಸ. ಜಮೀನು ಖರೀದಿ, ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನ ಹೆಚ್ಚಳ.
  • ಮಿಥುನ
  • ಹಿರಿಯರ ಜೊತೆಗಿನ ಅನಾವಶ್ಯಕ ವಿವಾದ ನಿಮ್ಮ ಏಳಿಗೆಯನ್ನು ಕುಂಠಿತಗೊಳಿಸುತ್ತದೆ. ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟ ಮತ್ತು ಕಾರ್ಮಿಕರ ಕೊರತೆ. ಕಾರ್ಮಿಕರಲ್ಲಿ ಭಿನ್ನಾಭಿಪ್ರಾಯ ಬಾರದಂತೆ ಎಚ್ಚರವಹಿಸಿ.
  • ಕರ್ಕಾಟಕ
  • ಷೇರು ಖರೀದಿ ಅಥವಾ ನಿವೇಶನಗಳಿಗೆ ಮುಂಗಡ ಪಾವತಿ ಮಾಡುವ ಮುನ್ನ ಹತ್ತು ಬಾರಿ ಆಲೋಚಿಸಿ, ನಂತರ ತೀರ್ಮಾನಕ್ಕೆ ಬನ್ನಿ. ರೈತಾಪಿ ವರ್ಗದವರಿಗೆ ವೃತ್ತಿಯಲ್ಲಿನ ಕ್ರಿಯಾಶೀಲತೆ ಶುಭದಾಯಕವಾಗುತ್ತದೆ.
  • ಸಿಂಹ
  • ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಸಂಪಾದನೆಯ ಜೊತೆಯಲ್ಲಿ ಉಡುಗೊರೆ ಸಿಗುವ ಯೋಗ ಇರುವುದು. ಕರಕುಶಲ ವಸ್ತುಗಳ ತಯಾರಕರು ತಮ್ಮ ಉತ್ತಮವಾದ ಕೆಲಸಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವರು.
  • ಕನ್ಯಾ
  • ಯಂತ್ರೋಪಕರಣಗಳ ಮಾರಾಟಗಾರರಿಗೆ ಲಾಭವುಂಟಾಗುವುದು. ಆತುರದ ಸ್ವಭಾವವನ್ನು ಕೊಂಚ ಸರಿಪಡಿಸಿಕೊಂಡು ಮತ್ತೊಬ್ಬರ ಭಾವನೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ತಿಳಿದು ಪ್ರತಿಕ್ರಿಯಿಸಿರಿ.
  • ತುಲಾ
  • ಆಫೀಸಿನ ಕೆಲಸಗಳು ಸುಗಮವಾಗಿ ನೆರವೇರಲಿದೆ. ಸ್ನೇಹಿತರೊಬ್ಬರ ನೆರವಿಗೆ ನಿಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಲಿದೆ. ಸಂತಸದಲ್ಲಿ ದಿನ ಕಳೆಯುವಿರಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿ ಆಗಲಿದೆ.
  • ವೃಶ್ಚಿಕ
  • ನೀವು ಸ್ವಪ್ರೇರಣೆಯಿಂದ ದೊಡ್ಡ ಸಾಧನೆಗಳನ್ನು ಮಾಡುವಿರಿ. ನಿಮ್ಮ ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ. ಶ್ರೀ ಆಂಜನೇಯ ಸ್ವಾಮಿಯ ದರ್ಶನವು ಮನಸ್ಸಿಗೆ ಧೈರ್ಯವನ್ನು ತರುವುದು.
  • ಧನು
  • ಈ ದಿನ ನೀವು ಮಾಡುವ ಹೊಸ ಕಾರ್ಯದಿಂದ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುವುದು. ಹೀಗಾಗಿ ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುವುದು.
  • ಮಕರ
  • ನಿಮ್ಮ ಅಚ್ಚುಕಟ್ಟಾದ ಕೆಲಸಗಳಿಂದ ಅಧಿಕಾರಿ ವರ್ಗದವರಲ್ಲಿ ನಿಮ್ಮ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸಿಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಹೆಚ್ಚಿನ ಲಾಭವನ್ನು ಹೊಂದುವಿರಿ.
  • ಕುಂಭ
  • ಕೆಲಸಗಳು ಎಷ್ಟು ಕಷ್ಟವಾದರೂ ನೀವೆಂದೂ ಸೋಲುವುದಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಅಧಿಕ ಪರಿಶ್ರಮ ಪಡಬೇಕಾಗುವುದು. ಏಜೆನ್ಸಿಯಂತಹ ಉದ್ಯೋಗ ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು.
  • ಮೀನ
  • ಸ್ಟೇಷನರಿ ಹೋಲ್‌ಸೇಲ್ ವ್ಯಾಪಾರಿಗಳು ವ್ಯಾಪಾರ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿ. ವೃತ್ತಿಯಲ್ಲಿ ಬದಲಾವಣೆ ಮಾಡುವವರು ಲಕ್ಷ್ಮೀ ಸಮೇತನಾದ ಶ್ರೀನಿವಾಸ ದೇವರ ಸೇವೆ ಮಾಡಿದರೆ ಶುಭವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.