ADVERTISEMENT

‘ಅವಕಾಶಕ್ಕಾಗಿ ಹೇಳಿದ್ದೆಲ್ಲಾ ಕೇಳಲ್ಲ’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
‘ಅವಕಾಶಕ್ಕಾಗಿ ಹೇಳಿದ್ದೆಲ್ಲಾ ಕೇಳಲ್ಲ’
‘ಅವಕಾಶಕ್ಕಾಗಿ ಹೇಳಿದ್ದೆಲ್ಲಾ ಕೇಳಲ್ಲ’   

ಸಿನಿಮಾಗಳಲ್ಲಿ ಅತ್ಯುತ್ತಮ ಅವಕಾಶ ಸಿಗಬೇಕು ಎಂದರೆ ನಟಿಯರು ಏನು ಬೇಕಾದರೂ ಮಾಡಲು ಸಿದ್ಧರಿರಬೇಕು. ಇದು ತೀರಾ ಮಾಮೂಲಿ ಎನ್ನುವಂತೆ ದಕ್ಷಿಣ ಭಾರತದವರು ನಟಿಯರನ್ನು ನಡೆಸಿಕೊಳ್ಳುತ್ತಾರೆ ಎಂದು ನಟಿ ರಾಧಿಕಾ ಆಪ್ಟೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪರಿಪಾಠ ದಕ್ಷಿಣ ಭಾರತ ಸಿನಿಕ್ಷೇತ್ರದಲ್ಲಿ ತುಂಬಾ ಇದೆ. ಅದು ಎಷ್ಟು ಅತಿರೇಕದಲ್ಲಿದೆ ಎಂದರೆ ಅವಕಾಶಗಳು ಸಿಗಬೇಕು ಎಂದರೆ ನಟಿ ಅವರೊಂದಿಗೆ ಮಲಗಲೂ ಒಪ್ಪಿಕೊಳ್ಳಬೇಕು. ನಿರ್ಮಾಪಕರೊಬ್ಬರನ್ನು ಭೇಟಿಯಾಗಬೇಕು ಎಂದು ತೆರಳಿದಾಗ ಅವರಿಗೆ ಸಂಬಂಧಿಸಿದವರು ನೇರವಾಗಿ ನನ್ನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ನಾನು ನಿರ್ಮಾಪಕರನ್ನು ಭೇಟಿಯಾಗುವ ಯೋಚನೆಯನ್ನೇ ಬಿಟ್ಟೆ. ಇಂಥ ಅನೇಕ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಗೊತ್ತಿಲ್ಲ, ಈ ಕಾರಣಗಳಿಗಾಗಿಯೇ ನಾನು ಹಲವಾರು ಅವಕಾಶಗಳನ್ನು ಕಳೆದುಕೊಂಡಿದ್ದಿರಬಹುದು’ ಎಂದೂ ಸಂದರ್ಶನದಲ್ಲಿ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.