ADVERTISEMENT

ಗಂಜಾಂ ಆಭರಣ ಮೇಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಗಂಜಾಂ
ಗಂಜಾಂ   

ಅಕ್ಷಯ ತೃತೀಯ ಎಂಬುದು ಆಭರಣದ ಅಂಗಡಿಯ ಮಾಲೀಕರಿಗೆ ಹಬ್ಬವಿದ್ದಂತೆ. ಅಕ್ಷಯ ತೃತೀಯಕ್ಕೆ ತಿಂಗಳ ಹಿಂದೆಯೇ ಆಭರಣ ಅಂಗಡಿಗಳಲ್ಲಿ ಸಿದ್ಧತೆಗಳು ಆರಂಭವಾಗಿರುತ್ತವೆ. ಅಕ್ಷಯ ತೃತೀಯಕ್ಕೆ ಪೂರ್ವಭಾವಿಯಾಗಿ ವಜ್ರದ ಆಭರಣ ಬ್ರಾಂಡ್‌ ಗಂಜಾಮ್‌ ಬಸವನಗುಡಿಯಲ್ಲಿರುವ ಗಂಜಾಮ್‌ ಮಂಟಪದಲ್ಲಿ ಏಪ್ರಿಲ್‌ 6ರಿಂದ 8ರವರೆಗೆ ಮೂರು ದಿನಗಳ ಕಾಲ ಆಭರಣ ಮೇಳ ನಡೆಯಿತು.

ಇಲ್ಲಿ ಗಂಜಾಮ್‌ ವಜ್ರದ ವಿನ್ಯಾಸಕರು ಕೈಯಿಂದಲೇ ಮಾಡಿರುವ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ವಜ್ರದ ಆಭರಣಗಳು ಕಣ್ಸೆಳೆಯುತ್ತಿದ್ದವು. ಎಲ್ಲಾ ವಯೋಮಾನದವರೂ ಧರಿಸಲು ಸಾಧ್ಯವಿರುವ ವಜ್ರದ ನೆಕ್ಲೆಸ್‌, ಕಿವಿಯೋಲೆ, ಡಾಬು, ಬಳೆ, ಉಂಗುರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಪ್ರಕೃತಿ ಸ್ಫೂರ್ತಿಯಿಂದ ವಿನ್ಯಾಸಗೊಳಿಸಲಾದ ಚೆರ್ರಿ ಬ್ಲೊಸಂ ಸರ, ಮುತ್ತಿನ ಸರ ವಿಭಿನ್ನ ವಿನ್ಯಾಸದಿಂದ ಇಷ್ಟವಾಗುವಂತಿತ್ತು. ಇದಲ್ಲದೇ ಏಳು ವಜ್ರದ ಹರಳಿನ ಕಿವಿಯೋಲೆ ಕಮಲ್‌, ಉದ್ಯೋಗಸ್ಥ ಮಹಿಳೆಯರಿಗಾಗಿ ವಿಶೇಷ ಸಂಗ್ರಹ ‘9 ಟು 9’, ವಿಶೇಷ ಹರಳುಗಳ ಸಂಗ್ರಹ ಇಲ್ಲಿವೆ. ಮನ ಮೆಚ್ಚಿದ ಆಭರಣಗಳ ಖರೀದಿ ಭರಾಟೆಯೂ ನಡೆಯುತ್ತಿತ್ತು.

ADVERTISEMENT

‘22 ಕ್ಯಾರೆಟ್‌ ಮತ್ತು 18 ಕ್ಯಾರೆಟ್‌ ಚಿನ್ನದ ಆಭರಣವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಪ್ರತಿ ಆಭರಣವನ್ನೂ ಎಫ್ ಬಣ್ಣದ ವಿವಿಎಸ್‌ ವಜ್ರವನ್ನು ಬಳಸಿ ಮಾಡಲಾಗಿದೆ’ ಎಂದು ಗಂಜಾಂ ಮಾರ್ಕೆಟಿಂಗ್‌ ವಿಭಾಗದ ದೀಪಾ ತಿಳಿಸಿದರು. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಏಪ್ರಿಲ್‌ 15ರಂದು ಗಂಜಾಮ್‌ ಸ್ಟೋರ್‌ಗಳು ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ತೆರೆದಿರುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.