ADVERTISEMENT

ತತ್ಪ್ರಣಮಾಮಿ ಸದಾಶಿವ ಲಿಂಗಂ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 14:15 IST
Last Updated 20 ಫೆಬ್ರುವರಿ 2012, 14:15 IST

ಸೃಷ್ಟಿಕರ್ತ ಶಿವನನ್ನು ಧೇನಿಸುತ್ತ, ನಮ್ಮಳಗಿನ ಶಿವನನ್ನು ಜಾಗೃತಗೊಳಿಸುತ್ತ ಬೆಂಗಳೂರಿಗರು ಸೋಮವಾರ ಶಿವ ದೇವಳಗಳಿಗೆ ಭೇಟಿ ನೀಡಿದರು. ನಗರದ ಗವಿಗಂಗಾಧರೇಶ್ವರ, ವಸಂತನಗರದಲ್ಲಿರುವ ಸಂಪಂಗಿ ರಾಮಮಂದಿರ, ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರು.
 
ಮನದೊಳಗಣ ಕೊಳೆಯನ್ನು ಗುಡಿಸುತ್ತ, ಗುಡಿ-ಸುತ್ತ ದರ್ಶನಕ್ಕಾಗಿ ಕಾದರು. ಹಾಲಾಹಲದ ಸಮಯದಲ್ಲಿ ಹಾಲಿನಭಿಷೇಕ ಮಾಡುತ್ತ ನೀಲಕಂಠನಾದ ಪರಶಿವನಿಗೆ ತಮ್ಮ ಭಕ್ತಿ ಸೇವೆ ಸಮರ್ಪಿಸಿದರು. ಶಿವರಾತ್ರಿಯ ಪೂಜೆ, ಉಪವಾಸ, ಜಾಗರಣೆಯೊಂದಿಗೆ ಭಕ್ತಿಪ್ರಿಯ ಶಿವನಿಗೆ ನಮಿಸಿದರು.
ಚಿತ್ರಗಳು: ಎಸ್.ಕೆ.ದಿನೇಶ್, ವಿಶ್ವನಾಥ ಸುವರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.