
ಕರ್ನಾಟಕ ವಿದ್ಯಾರ್ಥಿ ಕೂಟ ಮತ್ತು ಡಾ. ರಾಜ್ಕುಮಾರ್ (ಅಪ್ಪಾಜಿ) ಹೆಲ್ತ್ಕೇರ್ ಅಸೋಸಿಯೇಶನ್: ಯವನಿಕಾ ಸಭಾಂಗಣ, ಆರ್ಬಿಐ ಸಮೀಪ, ನೃಪತುಂಗಾ ರಸ್ತೆ. ವಿಶ್ವ ರಕ್ತದಾನಿಗಳ ದಿನಾಚರಣೆ, ರಕ್ತದಾನ ಅಭಿನಂದನಾ 2013 ಮತ್ತು ರಕ್ತದಾನ ಅಭಿನಂದನಾ ಜಾಥಾ. ಬೆಳಿಗ್ಗೆ 9.30ಕ್ಕೆ ರಕ್ತದಾನ ಅಭಿನಂದನಾ ಜಾಥಾ.
ಉದ್ಘಾಟನೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ. ಜಾಥಾ: ಸ್ವಾತಂತ್ರ್ಯ ಉದ್ಯಾನದಿಂದ ಯವನಿಕಾ ಸಭಾಂಗಣದವರೆಗೆ. ನೇತೃತ್ವ: ಬ್ಲಡ್ ಕುಮಾರ್.
ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ವಿತರಣಾ ಸಮಾರಂಭ: ರೋಟರಿ ಕ್ಲಬ್ನ ಲತಾ ಅಮಾಷಿ ಅವರಿಗೆ ರೆಡ್ಬ್ಲಡ್ ಪ್ರಶಸ್ತಿ (ಕಾಲ್ ಲ್ಯಾಂಡ್ಸ್ಟೈನರ್ ನೆನಪಿನಲ್ಲಿ), ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಯೋಜಕ ಧನಂಜಯ್ ಅವರಿಗೆ ವೈಟ್ ಬ್ಲಡ್ ಅವಾರ್ಡ್ (ಮಹಾತ್ಮ ಗಾಂಧೀಜಿ ನೆನಪಿನಲ್ಲಿ), ಎಎಸ್ಐ ಕೃಷ್ಣಸಿಂಗ್ ಅವರಿಗೆ ಬ್ಲಡ್ಸರ್ವಿಸ್ ಅವಾರ್ಡ್ (ಡಾ. ರಾಜ್ಕುಮಾರ್ ನೆನಪಿನಲ್ಲಿ). ಅಧ್ಯಕ್ಷತೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ. ಉದ್ಘಾಟನೆ: ಸಚಿವ ದಿನೇಶ್ ಗುಂಡೂರಾವ್.
ಅತಿಥಿಗಳು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಎಂ.ಕೆ. ಬಲದೇವ ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ, ಪಿ.ಎನ್. ವೈದ್ಯನಾಥನ್ ಗುರೂಜಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಸ್ಥಾಪಕ ಮಹಾಂತೇಶ್ ಜಿ. ಕಿವದಾಸನ್ನವರ್.
ಸಾಧಕರಿಗೆ ಸನ್ಮಾನ: ಕಿರುತೆರೆ ಕಲಾವಿದ ಶ್ರೀನಿವಾಸ್ ವಸಿಷ್ಠ, ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಪುಟ್ಟಸ್ವಾಮಿ ಗೌಡ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಶ್, ಸಂಕಲ್ಪ್ ಇಂಡಿಯಾ ಫೌಂಡೇಷನ್ನ ಲಲಿತ್ ಪರಮಾರ್, ರೇವಾ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ನ ಡೀನ್ ಡಾ. ಧನಂಜಯ, ಪ್ರಜಾವಾಣಿ ಸುದ್ದಿ ಸಂಪಾದಕ ಎ.ಎಸ್. ನಾರಾಯಣರಾವ್, ನಾಗೇಂದ್ರ, ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯಕ್, ಎಸ್.ಸಿ. ಸಂದೀಪ್, ಜಿಗಣಿ ರಾಮಕೃಷ್ಣ, ಸಂದೇಶ್, ವಸಂತ ಗಂಗೊಳ್ಳಿ, ವಿನೋದ್, ಎಚ್. ಹೇಮಲತಾ, ಶ್ಯಾಮ್ ಪ್ರಸಾದ್, ಡಾ. ಚಾಮೇಗೌಡ, ಡಾ. ಶಶಿಧರ ರಾವ್.
328ರ ಸುಡೊಕು ಹಾಗೂ 327ರ ಸುಡೊಕು ಉತ್ತರ ನಾಳಿನ ಸಂಚಿಕೆಯಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.