ADVERTISEMENT

ಶ್ರವಣ ಸಾಧನ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST
ಶ್ರವಣ ಸಾಧನ ವಿತರಣೆ
ಶ್ರವಣ ಸಾಧನ ವಿತರಣೆ   

ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜಿನ ವ್ಯವಹಾರ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರ ವಿಭಾಗವು ರೋಟರಿ ವಿಜಯಪುರದ ಸಹಯೋಗದೊಂದಿದೆ ಅರುಣ ಚೇತನ ಶಾಲೆಯ ಶ್ರವಣದೋಷವಿರುವ ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಿತು.

ಬಿಎಂಎಸ್ ಕಾಲೇಜು ಆವರಣದಲ್ಲಿ ನಡೆದ ‘ಸಿಟಿಜನ್ ಫಸ್ಟ್; ಮ್ಯಾನೇಜರ್‌ ನೆಕ್ಟ್ಸ್‌’ ಎಂಬ ಈ ಕಾರ್ಯ್ರಕಮಕ್ಕೆ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಎಸ್.ನಾಗೇಂದ್ರ ಅವರ ಮಾರ್ಗದರ್ಶನವಿತ್ತು. ಈ ಸಂದರ್ಭದಲ್ಲಿ ವಿವಿಧ ಬಗೆಯ ಶ್ರವಣ ಸಮಸ್ಯೆಗಳಿಂದ ಬಳಲುತ್ತಿರುವ ವಿಶಿಷ್ಟ ಸಾಮರ್ಥ್ಯದ ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಬಿಎಂಎಸ್‌ಸಿಇ- ಕಾಲೇಜಿನ ಈ ಚಟುವಟಿಕೆಯು ‘ಅರುಣ ಚೇತನ’ ಶಾಲೆಯ ಮಕ್ಕಳ ಬಾಳಿನಲ್ಲಿ ಹೊಸ ಭರವಸೆ ಮೂಡಿಸಿತು. 

ಬಿಎಂಎಸ್‌ಸಿಇಯ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು ಹಾಗೂ ರೋಟರಿ ವಿಜಯಪುರ ಟ್ರಸ್ಟ್‌ನ ಅಧ್ಯಕ್ಷ ಸತ್ಯಜೋತಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.