ಮಾರ್ಚ್ 3, ಗುರುವಾರ
ದಶೋಪನಿಷತ್
ಪೂರ್ಣಪ್ರಜ್ಞ ವಿದ್ಯಾಪೀಠ: ಪೇಜಾವರ ವಿಶ್ವೇಶ್ವತೀರ್ಥ ಶ್ರೀಗಳಿಂದ ‘ದಶೋಪನಿಷತ್’ ಪ್ರವಚನ. ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ. ಸಂಜೆ 6.45.
ಪತ್ರಿಕೆಗಳ ಲೋಕಾರ್ಪಣೆ
ನ್ಯಾಷನಲ್ ಪದವಿ ಕಾಲೇಜು ಇತಿಹಾಸ ಮತ್ತು ಪತ್ರಿಕೋದ್ಯಮ ವಿಭಾಗ: ಡಾ.ಎ.ಎಚ್. ರಾಮರಾವ್ ಅವರಿಂದ ವಿವೇಕ ಶ್ರೀ (ಇತಿಹಾಸ ಪತ್ರಿಕೆ) ಮತ್ತು ದರ್ಪಣ (ಪತ್ರಿಕೋದ್ಯಮ ಪತ್ರಿಕೆ) ಲೋಕಾರ್ಪಣೆ.
ಸ್ಥಳ: ಜಯನಗರ 7ನೇ ಬ್ಲಾಕ್. ಬೆಳಿಗ್ಗೆ 10.30.
ಕೊಳಲು ವಾದನ.
ಜಯೇಂದ್ರ ಸರಸ್ವತಿ ಸ್ವಾಮೀಜಿ ಪ್ಲಾಟಿನಂ ಜ್ಯೂಬಿಲಿ ಚಾರಿಟೆಬಲ್ ಟ್ರಸ್ಟ್: ಆರ್.ಎಸ್.ಜಗನ್ನಾಥ್ ಅವರಿಂದ ಕೊಳಲು ವಾದನ. ಸ್ಥಳ; ಕಂಚಿ ಶಂಕರ ಮಠ, ಮಹಾಸ್ವಾಮಿಗಳ್ ಮಾರ್ಗ, 5ನೇ ಮೇನ್, 11ನೇ ಕ್ರಾಸ್ ಮಲ್ಲೇಶ್ವರ. ಸಂಜೆ 6.30.
ಭಜನೆ
ಕೆರೆಮುನೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಸಾಯಿ ಮಂದಿರ: 7.30ಕ್ಕೆ ಸಾಯಿ ಬಾಬಾ ಕ್ಷೀರಾಭಿಷೇಕ, 10ಕ್ಕೆ ಗಣಪತಿ ಹೋಮ, ಸಾಯಿ ಹೋಮ. ಸಂಜೆ 6.30ಕ್ಕೆ ಮಂಜುಳ ಎನ್.ತಿಮ್ಮರಾಜು ಮತ್ತು ಸಂಗಡಿಗರಿಂದ ವಿಷ್ಣು ಸಹಸ್ರನಾಮ ಮತ್ತು ಸಾಯಿ ಭಜನೆ.
ಸ್ಥಳ: ರಿಚ್ಮಂಡ್ ಟೌನ್ ಪಾರ್ಕ್ ಎದುರು (ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯ ಹತ್ತಿರ), ಶಾಂತಿನಗರ.
ಗೀತಾ ಪಾರಾಯಣ
ಪರಮಹಂಸ ಸನ್ಯಾಸ ಆಶ್ರಮ: ಆಶ್ರಮದ ಭಕ್ತವೃಂದದಿಂದ ಭಗವದ್ಗೀತಾ ಪಾರಾಯಣ. 10ಕ್ಕೆ ರಘುವೀರಾನಂದಜಿ ಮಹಾರಾಜ್ ಅವರಿಂದ ಭಜನೆ ಮತ್ತು ಪ್ರವಚನ. ಸ್ಥಳ: ನಂ.61, 9ನೇ ಅಡ್ಡ ರಸ್ತೆ, 1ನೇ ಮುಖ್ಯ ರಸ್ತೆ, ರಹೇಜಾ ಅಪಾರ್ಟ್ಮೆಂಟ್ ಎದುರು. ಗೋವಿಂದರಾಜನಗರ.
ಮಾರ್ಚ್ 4, ಶುಕ್ರವಾರ
ಜಯಶ್ರೀ ನೃತ್ಯ
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಶ್ರೀ ರವಿ ಸಿರ್ಸಿ ಅವರಿಂದ ಭರತ ನಾಟ್ಯ. ಸ್ಥಳ: ಯವನಿಕಾ, ನೃಪತುಂಗ ರಸ್ತೆ. ಸಂಜೆ 6.
ಏಕಾಂತ ರಾಮಯ್ಯ...
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು; ಗೊಂಡೇದಹಳ್ಳಿ ಜಗದಾಂಬಾ ಮತ್ತು ಪಶುವೈದ್ಯ ಶಿವಲಿಂಗಪ್ಪ ದತ್ತಿ ಉಪನ್ಯಾಸ. ಸಂಗಮ ಮರುಳಪ್ಪ ಅವರಿಂದ ಶರಣ ಏಕಾಂತ ರಾಮಯ್ಯ ಕುರಿತು ಉಪನ್ಯಾಸ. ಸ್ಥಳ: ಜೆಎಸ್ಎಸ್ ಕಾಲೇಜು ಸಭಾಂಗಣ, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯ ರಸ್ತೆ, 8ನೇ ವಿಭಾಗ, ಜಯನಗರ. ಸಂಜೆ 6.
ಮೌಲ್ಯ ಮತ್ತು ನೀತಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಡಾ. ಅಲಿ ಕ್ವಾಜಾ ಅವರಿಂದ ‘ಮೌಲ್ಯ ಮತ್ತು ನೀತಿ’ ಕುರಿತು ಉಪನ್ಯಾಸ. ಸ್ಥಳ; ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 5.
ಉಪನ್ಯಾಸ
ಥಿಯಸಾಫಿಕಲ್ ಸೊಸೈಟಿ: ಬೆಳಿಗ್ಗೆ 11ಕ್ಕೆ ಭಾರತ ಸಮಾಜ ಪೂಜೆ ಮತ್ತು ಮಧ್ಯಾಹ್ನ 1ಕ್ಕೆ ಟಿ. ನಾರಾಯಣ ಸ್ವಾಮಿ ಅವರಿಂದ ‘ಪತಂಜಲಿ ಯೋಗ ಸೂತ್ರಗಳು’ ಕುರಿತು ಉಪನ್ಯಾಸ.
ಸ್ಥಳ: ತಾಯಮ್ಮ ರಾಮರಾಜು ಅವರ ಮನೆ. ನಂ.23, 3ನೇ ಮುಖ್ಯ ರಸ್ತೆ, ಶ್ರೀಕಂಠೇಶ್ವರ ನಗರ (ಮಹಾಲಕ್ಷ್ಮಿ ಬಡಾವಣೆ). ಮಾಹಿತಿಗೆ: 99454 32291.
ಮರಣೋತ್ತರ ಜೀವನ
ಯೋಗೇಶ್ವರ ಶ್ರೀ ಕೃಷ್ಣ ಸೇವಾ ಟ್ರಸ್ಟ್: ಯೋಗೇಶ್ವರ ಶ್ರೀ ಕೃಷ್ಣ ಗುರೂಜಿ ಅವರಿಂದ ಅಮಾವಾಸ್ಯೆಯ ಪ್ರಯುಕ್ತ ‘ಮರಣೋತ್ತರ ಜೀವನ’ ಕುರಿತು ಪ್ರವಚನ. ಅಖಂಡ ಶ್ರೀ ಲಕ್ಷ್ಮೀ ಸಹಸ್ರನಾಮ ಪಾರಾಯಣ ಹಾಗೂ ಭಜನೆ.ಸ್ಥಳ: ಧರ್ಮಕ್ಷೇತ್ರ, ಬನಗಿರಿ ಶ್ರೀ ಕೃಷ್ಣ ಮಂದಿರ, ಬನಶಂಕರಿ. ಬೆಳಿಗ್ಗೆ 11 ರಿಂದ ಸಂಜೆ 6. ಮಾಹಿತಿಗೆ: 94490 01718.
ಕನ್ನಡ ಸಮ್ಮೇಳನದ ದಾರಿ...
ಬ್ರೈನ್ ಸೆಂಟರ್ ಮತ್ತು ಬ್ಲಾಸಂಸ್ ಶಾಲೆ: ವಿಶ್ವ ಕನ್ನಡ ಸಮ್ಮೇಳನ ಅಂಗವಾಗಿ ಜನ ಜಾಗೃತಿ ಚಿಂತನ ಗೋಷ್ಠಿ. ಡಾ. ಕೋ.ವೆಂ.ರಾಮಕೃಷ್ಣಗೌಡ ಅವರಿಂದ ‘ವಿಶ್ವ ಕನ್ನಡ ಸಮ್ಮೇಳನದ ಪರಿಕಲ್ಪನೆ ಮತ್ತು ನಡೆದುಬಂದ ದಾರಿ’ ಕುರಿತು ಉಪನ್ಯಾಸ. ಅತಿಥಿಗಳು: ಡಿ.ಎನ್.ಹರಿದಾಸ್, ಮನೋಜ್ ಕುಮಾರ್, ಡಿ.ಶಶಿಕುಮಾರ್. ಸ್ಥಳ: ಬ್ಲಾಸಂಸ್ ಶಾಲೆ, ಬಾಗಲಗುಂಟೆ ಮುಖ್ಯರಸ್ತೆ. ಬೆಳಿಗ್ಗೆ 10.
ಪ್ರವಚನ
ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಧನಂಜಯಾಚಾರ್ಯ ಅವರಿಂದ ಮಹಾಭಾರತ ಪ್ರವಚನ.
ಸ್ಥಳ: 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 7.
ಭಜನೆ
ಶ್ರೀ ಕಾಳಿಯಮ್ಮನ ದೇವಾಲಯ: ರಾಜಗೋಪುರದ ಮಹಾ ಕುಂಭಾಭಿಷೇಕ ನಿಮಿತ್ತ ಬೆಳಿಗ್ಗೆ 9.30ಕ್ಕೆ ಕೆಂಪಮ್ಮ ದೇವಿಯ ಅಲಂಕಾರ, ವಾಸ್ತು ಹೋಮ. ಸಂಜೆ 6ಕ್ಕೆ ಪಾಲಕ್ಕಾಡಿನ ಭಜನೆ ಚಕ್ರವರ್ತಿ ಮಂಜಮೋಹನ್ ಅವರಿಂದ ಭಕ್ತಿ ಗೀತೆ.ಸ್ಥಳ; ಕಾಳಿಯಮ್ಮನ ದೇವಾಲಯ ಬೀದಿ. ಹಲಸೂರು ಮಾರ್ಕೆಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.