ADVERTISEMENT

21ರಂದು `ವಾದ್ಯ ನೃತ್ಯಂ'

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ವಿವಿಧ ಪ್ರಕಾರದ ನೃತ್ಯ ಕಾರ್ಯಕ್ರಮಗಳಿಗೆ ವೇದಿಕೆಯಾಗುವ ಮಲ್ಲೇಶ್ವರದ ಸೇವಾ ಸದನದಲ್ಲಿ ಇದೇ 21ರಂದು ಅಪರೂಪದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಗಾಯನ ಸಹಕಾರವಿಲ್ಲದ, ಬರಿಯ ವಾದ್ಯಗಳ ಹಿಮ್ಮೇಳದ ನೃತ್ಯ ಕಾರ್ಯಕ್ರಮವಿದು.

ಕೃಷ್ಣ ಕರ್ಣಾಮೃತ ಶ್ಲೋಕದಲ್ಲಿ ಬರುವ ಯಶೋದೆ ಕೃಷ್ಣನಿಗೆ ರಾಮಾಯಣದ ಕತೆಯನ್ನು ಹೇಳುವ ಸನ್ನಿವೇಶವನ್ನು ನೃತ್ಯ ರೂಪದಲ್ಲಿ ಪ್ರಸ್ತುತಪಡಿಸುವುದು ವಿಶೇಷ.

ಕೊಳಲು (ಜಯರಾಮ್), ಪಿಟೀಲು (ದಯಾಕರ್), ಮೃದಂಗ (ನಾರಾಯಣ ಸ್ವಾಮಿ) ವಾದ್ಯ ಸಹಕಾರ ನೀಡುತ್ತಾರೆ.  ಸಮಯ: ಸಂಜೆ 6ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.