ಸರ್ಕಾರಿ ಶಾಲೆಯ ಬಡ ಮಕ್ಕಳಿಗಾಗಿ ಆರ್ಆರ್ನಗರ, ಚನ್ನಸಂದ್ರದ ಎಂಎನ್ಸಿ ಈಜು ಅಕಾಡೆಮಿ ವತಿಯಿಂದ ಉಚಿತವಾಗಿ ಈಜು ಶಿಬಿರ ಆಯೋಜಿಸಲಾಗಿದೆ.
ಪರಿಸರ ಪ್ರೇಮಿ ಈಜುಕೊಳದಲ್ಲಿ ಬಡ ಮಕ್ಕಳು ಅಭ್ಯಾಸ ಮಾಡುವ ಅವಕಾಶ ನೀಡಲಾಗಿದೆ. ಅಲ್ಲದೇ ಸ್ಥಳೀಯ ನಿವಾಸಿಗಳಿಗೆ ವಿಶೇಷ ರಿಯಾಯಿತಿಯನ್ನೂ ನೀಡಲಾಗಿದೆ.
ಪಂಚತಾರಾ ಹೋಟೆಲ್ಗಳಲ್ಲಿ ಲಭ್ಯವಿರುವಂತಹ ಬಿಸಿ ನೀರಿನ ಈಜುಕೊಳ ಇದಾಗಿದೆ. ಕ್ಲೋರಿನ್, ಆ್ಯಸಿಡ್, ಬ್ಲೀಚಿಂಗ್ ಸೇರಿದಂತೆ ಇತರ ರಾಸಾಯನಿಕಗಳನ್ನು ಬಳಸದೆ ಪರಿಸರ ಸ್ನೇಹಿ ಅತ್ಯಾಧುನಿಕ ತಂತ್ರಜ್ಞಾನವನ್ನು ಇದು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ರಾಸಾಯನಿಕ ಇಲ್ಲದೇ ನೀರನ್ನು ಯಾವಾಗಲೂ ಸ್ವಚ್ಛವಾಗಿ ಇಡುವಂತಹ ಓರೆನ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಮಹಿಳೆಯರು, ವೃದ್ದರು ಹಾಗೂ ಮಕ್ಕಳು ಕೂಡ ಇಲ್ಲಿ ಈಜುತ್ತಿದ್ದಾರೆ.
ಶ್ರೀಮಂತರು ಬಳಸುವಂತಹ ಈಜುಕೊಳದ ಸೌಲಭ್ಯ ಬಡವರಿಗೂ ಸಿಗುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಏಪ್ರಿಲ್ 1ರಿಂದ ಬೇಸಿಗೆ ಶಿಬಿರ ಆಯೋಜಿಸುತ್ತಿದೆ.
ಹೆಚ್ಚಿನ ಮಾಹಿತಿಗೆ:96202 11455ಅಥವಾ94828 84555 ಸಂಖ್ಯೆಗೆ ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.