ಉಕ್ರೇನ್ನಿಂದ ಜನರನ್ನು ತೆರವು ಮಾಡುತ್ತಿರುವ ವಿಮಾನವೊಂದರ ಒಳಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ತಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ಯುದ್ಧಪೀಡಿತ ದೇಶದಿಂದ ಭಾರತಕ್ಕೆ ವಾಪಸಾಗಲು ವಿಮಾನ ಹತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಪುಟಿನ್ ಅವರು ಖುದ್ದಾಗಿ ಭೇಟಿ ಮಾಡಿದ್ದಾರೆ ಎಂದು ಈ ವಿಡಿಯೊಗೆ ವಿವರಣೆ ನೀಡಲಾಗಿದೆ. ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಟಿನ್ ಅವರು ನೀಡುತ್ತಿರುವ ಗೌರವ ಇದು ಎಂದು ಈ ವಿಡಿಯೊ ಹಂಚಿಕೊಂಡಿರುವವರು ವಿಶ್ಲೇಷಿಸಿದ್ದಾರೆ.
ಈ ವಿಡಿಯೊದಲ್ಲಿ ಇರುವ ವ್ಯಕ್ತಿ ಪುಟಿನ್ ಅಲ್ಲ. ಅವರು ರೊಮೇನಿಯಾದ ಭಾರತ ರಾಯಭಾರಿ ರಾಹುಲ್ ಶ್ರೀವಾತ್ಸವ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಫೆಬ್ರುವರಿ 26ರಂದು ಎಎನ್ಐ ಸುದ್ದಿಸಂಸ್ಥೆ ಈ ವಿಡಿಯೊವನ್ನು ಟ್ವೀಟ್ ಮಾಡಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ಅವರು ಶ್ರೀವಾತ್ಸವ ಅವರು ಹೇಳಿರುವುದು ವಿಡಿಯೊದಲ್ಲಿ ಉಲ್ಲೇಖವಾಗಿದೆ. ಉಕ್ರೇನ್ನಿಂದ ಸ್ಥಳಾಂತರ ಸಾಧ್ಯವಾಗದ ವಿದ್ಯಾರ್ಥಿಗಳನ್ನು ಕುರಿತೂ ಅವರು ಮಾತನಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.