ನಗರವೊಂದರ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ಗುಂಪೊಂದು ಹಾನಿಗೀಡು ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿರುವುದು ಕೇಳುತ್ತದೆ. ‘ಉತ್ತರ ಪ್ರದೇಶದ ಪ್ರತಾಪ್ಗಡದ ಲಾಲ್ಗಂಜ್ ನಗರದಲ್ಲಿ ಮುಸ್ಲಿಮರು ದುರ್ಗಾ ಪೂಜೆ ಪೆಂಡಾಲ್ಗಳನ್ನು ಧ್ವಂಸಗೊಳಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಹಿಂದೂಗಳ ಗುಂಪು ಮುಸ್ಲಿಮರನ್ನು ಥಳಿಸಿತು. ಜೊತೆಗೆ, ಮಸೀದಿಗಳ ಮೇಲೆ ಹಾರಿಸಿದ್ದ ಮುಸ್ಲಿಮರ ಧಾರ್ಮಿಕ ಧ್ವಜಗಳನ್ನು ತೆಗೆದುಹಾಕಿತು’ ಎಂದು ಅಡಿಬರಹವನ್ನೂ ನೀಡಲಾಗಿದೆ.
ಈ ಮಾಹಿತಿ ಸುಳ್ಳು ಎಂಬುದನ್ನು ಉತ್ತರ ಪ್ರದೇಶ ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆ 2021ರ ಅ.5ರಂದು ಛತ್ತೀಸಗಡದ ಕವರ್ಧಾದಲ್ಲಿ ನಡೆದಿದೆ. ಈ ಘಟನೆಗೂ ಪ್ರತಾಪಗಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಟ್ವೀಟ್ ಮಾಡಿದೆ. ಜೊತೆಗೆ, ‘ನಯಾ ಭಾರತ್’ ಎಂಬ ಸುದ್ದಿ ಪೋರ್ಟಲ್ನಲ್ಲಿ ಆ ಘಟನೆಗೆ ಸಂಬಂಧಿಸಿದಂತೆ ಪ್ರಕಟವಾಗಿದ್ದ ಸುದ್ದಿಯನ್ನೂ ಪೋಸ್ಟ್ ಮಾಡಿದೆ. ಧ್ವಜ ಹಾರಿಸುವ ಕುರಿತು ನಡೆದಿದ್ದ ಸಂಘರ್ಷ ಕುರಿತ ವಿಡಿಯೊ ಇದು ಎಂದು ಟ್ವೀಟ್ನಲ್ಲಿ ಹೇಳಲಾಗಿದೆ. ಈ ವರದಿಯನ್ನು ಆಲ್ಟ್ ನ್ಯೂಸ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.