ADVERTISEMENT

Fact check: ಬಿಜೆಪಿ ಬ್ಯಾನರನ್ನು ಹರಿಯುತ್ತಿರುವ ವಿಡಿಯೊ, ಇದು ರೈತರ ಕೆಲಸವೇ?

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:30 IST
Last Updated 29 ನವೆಂಬರ್ 2021, 19:30 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

ಗುಂಪೊಂದು ವೇದಿಕೆಗೆ ಹತ್ತಿ, ವೇದಿಕೆಯನ್ನು ಧ್ವಂಸಗೊಳಿಸುವ ಮತ್ತು ಬಿಜೆಪಿ ಬ್ಯಾನರನ್ನು ಹರಿಯುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಹರಿಯಾಣದಲ್ಲಿ ರೈತರು ನಡೆದುಕೊಂಡ ರೀತಿ ಇದು ಎಂದು ಹೇಳಲಾಗಿದೆ. ‘ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಹೇಳಿದ ಬಳಿಕ ಈ ರೀತಿಯ ಘಟನೆಗಳು ನಡೆಯುತ್ತಿವೆ. ಮಾಧ್ಯಮಗಳು ಇವನ್ನು ತೋರಿಸುವುದಿಲ್ಲ’ ಎಂದು ಅಡಿ ಬರಹ ನೀಡಲಾಗಿದೆ.

ಈ ಘಟನೆ ನಡೆದಿರುವುದು 2021ರ ಜನವರಿಯಲ್ಲಿ ಎಂದು ಲಾಜಿಕಲ್‌ ಇಂಡಿಯನ್‌ ಹೇಳಿದೆ. ಈ ಕುರಿತು ಎಬಿಪಿ ನ್ಯೂಸ್‌ 2021ರ ಜ.10ರಂದು ವರದಿ ಮಾಡಿದೆ. ಈ ಘಟನೆ ಹರಿಯಾಣದ ಕರ್ನಾಲ್‌ನಲ್ಲಿ ನಡೆದಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಆಯೋಜಿಸಿದ್ದ ಮಹಾಪಂಚಾಯಿತಿಗೆ ರೈತರು ಅಡ್ಡಿಪಡಿಸಿದ್ದರು. ಈ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್‌ ವಿರುದ್ಧ ಖಟ್ಟರ್‌ ಹರಿಹಾಯ್ದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT