ADVERTISEMENT

ಅಕ್ರಮ ಹಣ ವರ್ಗ: ರಾಬ್ಡಿದೇವಿ ಹೇಳಿಕೆ ದಾಖಲು

ಪಿಟಿಐ
Published 22 ಮೇ 2018, 19:39 IST
Last Updated 22 ಮೇ 2018, 19:39 IST

ಪಟ್ನಾ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಅವರಿಂದ ಸಿಬಿಐ ಹೇಳಿಕೆ ದಾಖಲಿಸಿಕೊಂಡಿದೆ.

ನೋಟು ರದ್ದು (ಅಮಾನ್ಯೀಕರಣ) ಆದಾಗ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿರುವ ಆರೋಪ ಇವರ ಮೇಲಿದೆ. ಸಿಬಿಐ ತಂಡ ರಾಬ್ಡಿದೇವಿ ಅವರನ್ನು 20 ನಿಮಿಷ ವಿಚಾರಣೆ ನಡೆಸಿತು.

ರಾಬ್ಡಿದೇವಿ ಅವರಿಗೆ  ಕೆಲವು ದಿನಗಳ ಹಿಂದಷ್ಟೆ ಸಿಬಿಐ ನೋಟಿಸ್‌ ನೀಡಿತ್ತು. ಬಿಹಾರದ ಅವಾಮಿ ಸಹಕಾರಿ ಬ್ಯಾಂಕ್‌ನ ವಹಿವಾಟಿನ ಬಗ್ಗೆ ವಿಚಾರಿಸಲಾಗಿದೆ ಎಂದು ಲಾಲು ಕುಟುಂಬದ ಆಪ್ತ ಮತ್ತು ಶಾಸಕ ಭೋಲ್‌ ಯಾದವ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.