ಅಗರ್ತಲ (ಪಿಟಿಐ): ನಿರಾಶ್ರಿತರ ಕೇಂದ್ರಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 19 ಮಂದಿ ಸಜೀವ ದಹನವಾಗಿರುವ ಘಟನೆ ಶನಿವಾರ ನಡೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 2500ಕ್ಕೂ ಹೆಚ್ಚು ಗುಡಿಸಿಲುಗಳು ಭಸ್ಮವಾಗಿವೆ.
ಇಲ್ಲಿಂದ 165 ಕಿ.ಮೀ ದೂರದಲ್ಲಿರುವ ಕಂಚನ್ಪುರದ 6 ನಿರಾಶ್ರಿತ ಶಿಬಿರಗಳಲ್ಲಿ ಒಂದಾದ ನೈಶಿಂಗ್ಪಾರದಲ್ಲಿ ಈ ದುರ್ಘಟನೆ ನಡೆದಿದೆ. ಮಿಜೊರಾಂನ ರಿಯಾಂಗ್ ಬುಡಕಟ್ಟಿಗೆ ಸೇರಿದ ಈ ಮಂದಿ, 1997ರಲ್ಲಿ ನಡೆದ ಜನಾಂಗೀಯ ಕಲಹದ ಬಳಿಕ ಅಲ್ಲಿಂದ ಪಲಾಯನ ಮಾಡಿ ಇಲ್ಲಿ ಬಂದು ನೆಲೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.