ADVERTISEMENT

ಅಣುಶಕ್ತಿ ಯೋಜನೆ ಕೈಬಿಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ತಿರುನೆಲ್ವೇಲಿ/ತಮಿಳುನಾಡು (ಪಿಟಿಐ): ಕಂದನ್‌ಕೊಳಂ ಅಣು ಶಕ್ತಿ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸುಮಾರು ನಾಲ್ಕು ಸಾವಿರ ಜನ ಭಾನುವಾರ ಇಲ್ಲಿ ಉಪವಾಸ ನಡೆಸಿದರು.

ಉದ್ದೇಶಿತ ಯೋಜನೆಯ ಕೇಂದ್ರ ಸ್ಥಳದಿಂದ 5 ಕಿ.ಮೀ. ದೂರದ ಗ್ರಾಮದಲ್ಲಿ ಉಪವಾಸ ನಡೆಸಲಾಯಿತು. ಅಣು ಸ್ಥಾವರದಲ್ಲಿನ 1000 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ರಿಯಾಕ್ಟರ್‌ಗಳ ಕಾರ್ಯ ಅಂತಿಮ ಹಂತಕ್ಕೆ ತಲುಪಿರುವ ವಿಷಯ ತಿಳಿದು ಗ್ರಾಮಸ್ಥರು ಸತ್ಯಾಗ್ರಹಕ್ಕೆ ಮುಂದಾಗಲು ಪ್ರಮುಖ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.