ADVERTISEMENT

ಅಣ್ಣಾ ತಂಡದ ಪ್ರವಾಸ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ನವದೆಹಲಿ (ಐಎಎನ್‌ಎಸ್): ಉತ್ತರ ಪ್ರದೇಶದ ಚುನಾವಣೆಯಲ್ಲಿ ಜನ ಲೋಕಪಾಲ ಮಸೂದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಣ್ಣಾ ತಂಡ ರಾಜ್ಯದಲ್ಲಿ ಗುರುವಾರ ಪ್ರವಾಸ ಆರಂಭಿಸಲಿದೆ.

ಲೋಕಪಾಲ ಮಸೂದೆ ಬಗ್ಗೆ ರಾಜಕೀಯ ಪಕ್ಷಗಳ ನಿಲುವುಗಳನ್ನು ತಂಡ ಮತದಾರರಿಗೆ ತಿಳಿಸಲಿದೆ. ಬಾರಾಬಂಕಿ ಮತ್ತು ಗೋಂಡಾದಲ್ಲಿ ಗುರುವಾರ, ಫೈಜಾಬಾದ್ ಮತ್ತು ಬಸ್ತಿಯಲ್ಲಿ ಶುಕ್ರವಾರ ಸಾರ್ವಜನಿಕ ರ‌್ಯಾಲಿ ನಡೆಸಲಾಗುವುದು ಎಂದು ತಂಡದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.