ಜಮ್ಮು: ದಕ್ಷಿಣ ಕಾಶ್ಮೀರದ ಅಮರನಾಥ ಗುಹಾಂತರ ದೇವಾಲಯಕ್ಕೆ ಯಾತ್ರೆ ತೆರಳಲು ಈ ಬಾರಿ ಸುಮಾರು 1.70 ಲಕ್ಷ ಯಾತ್ರಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
60 ದಿನಗಳ ಅವಧಿಯಲ್ಲಿ ನಡೆಯುವ ಯಾತ್ರೆ ಜೂನ್ 28ರಿಂದ ಜಮ್ಮುವಿನಿಂದ ಆರಂಭಗೊಳ್ಳಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಮತ್ತು ಎಸ್ ಬ್ಯಾಂಕ್ಗಳ ಒಟ್ಟು 440 ಶಾಖೆಗಳಲ್ಲಿ ಯಾತ್ರಿಕರು ಹೆಸರು ನೋಂದಾಯಿಸಿದ್ದಾರೆ ಎಂದಿದ್ದಾರೆ.
ಆಗಸ್ಟ್26 ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.